Thoughts of mind by Kumar B B

ಕಳೆವ ಕ್ಷಣಗಳು ಮುಂದಡಿಯಾಗಬೇಕು ಭವಿತದಲಿ,

ಬೆಳೆವ ಪ್ರತಿ ಸಸಿಯು ವರವಾಗಬೇಕು ಭುವಿಯಲಿ,

ಒಣಗಿದರೂ ಮರಮುಟ್ಟಾಗಬೇಕು ನೂರ್ಕಾಲ ಭವನದಲಿ,

ಬಣಗುಡದಿರಲಿ ಬರಿನೆಲದ ಮೇಲೆ ಕರಿನೆರಳಾಗಿ ಭುವನದಲಿ.


- ಕುಮಾರ್ ಬಿ ಬಾಗೀವಾಳ್.


ಮರೆತು ಬಿಡು ಮನವೆ ಮಾಗದ ಅದೆಷ್ಟೋ

ಕಾಯಿಗಳು ಉದುರಿ ಕೊಳೆತಿವೆ ನೆಲದೊಳಗೆ,

ಕೊರಗಿದರಾಗದು ಸರಿ ಎಚ್ಚರಗೊಳ್ಳು ಮನದೊಳಗೆ

ನಾಯಿಗಳು ಎಳೆದಾಡಾವು ನೀನು ನೆಲಕುರುಳಿದರೆ ಧರೆಯೊಳಗೆ.


ಕುಮಾರ್ ಬಿ ಬಾಗೀವಾಳ್





ಕೊರಗದಿರು ಹೂವೆ ಹಿಡಿಕೆ ಒರಟೆಂದು ಉದುರಿ ಹೋಗುವೆ ಅರಳುವ ಮುನ್ನ ಅದಿರದಿರೆ ಸೇರದೆ ಮುಡಿಯನೋ, ದೇವರ ಗುಡಿಯನೋ. ರಚನೆ : ಕುಮಾರ್ ಬಿ ಬಾಗೀವಾಳ್.

Comments

Popular posts from this blog

ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು?

ಅಕ್ಕಮಹಾದೇವಿಯವರ ಆಯ್ದ ವಚನಗಳು. Selected Vachanas of Akkamahadevi.

ವೃತ್ತಗಳು CIRCLES