Posts

Showing posts with the label #bbksir

ಅಂತಿಮವಾಗು… ಪರರ ಪರಪಂಚದಲಿ. Anthimavagu... a poem by Kumar B Bagival

  ಅಂತಿಮವಾಗು… ಪರರ ಪರಪಂಚದಲಿ. ನಾ ನಡೆದದ್ದೇ ಹಾದಿಯಾಗಬೇಕು  ನಾ ಕಂಡಿದ್ದೇ ನಿಜವಾಗಬೇಕು ನಾ ಕೊಂಡಿದ್ದೇ ವರವಾಗಬೇಕು ನಾ ನುಡಿದಿದ್ದೇ ಅಂತಿಮವಾಗಬೇಕು. ಎಂದಾದರೆ ಅದು ನೀನೊಬ್ಬನಿರುವ ಪರಪಂಚದಲ್ಲಿ ಮಾತ್ರ. ಬೆಳಕಾಗು ಹಾದಿಯಾಗಲು, ಕನ್ನಡಿಯಾಗು ನಿಜವಾಗಲು, ದೇವರಾಗು ವರವಾಗಲು, ಅಂತರಾತ್ಮವಾಗು ಅಂತಿಮವಾಗಲು. ಅಂದಾದರೆ ಮಾತ್ರ ನೀನಿರುವೆ ಪರರ ಪರಪಂಚದಲಿ. ರಚನೆ : ಕುಮಾರ್ ಬಿ ಬಾಗೀವಾಳ್

ದಮ್ಮವದು ನಿಲುಕದು a poem by Kumar B Bagival

  ದಮ್ಮವದು ಬೊಮ್ನನ ಮೀರಿದುದು  ನೆಮ್ಮದಿಗದು ಕಮ್ಮಿಯಿಲ್ಲದುದು  ಆಸೆಗಾಸೆಯು ಬೊಗಸೆ ತುಂಬುವ ತವಕವದು ನಿನ್ನ ದುಃಖದ ಮಡಿಲು, ಬಿಡಿಗಾಸಿನ ಸುಖವಲ್ಲ ಬದುಕು. ನುಡಿಯೆಲ್ಲವು ನಡೆಯಾಗಿ ಮುಡುಪಿಲ್ಲದ ಬದುಕದು ತಡಿಯಿಲ್ಲದ ದೋಣಿ ಪಯಣದ ಅಂಬಿಗನ ಬದುಕು ಪಡಿಯಂಚು ಹೊಟ್ಟೆ ಹಸಿದವರ ಪಾಲದು ನಿನದಲ್ಲವದು ಹಿಡಿ ಋಜುಮಾರ್ಗವನೆ ನಡೆ ಗುರಿಯಂಚಿಗೆ ನಿಜ ಪಥ ಜೀವನಕದು. ಬಯಸಿದ್ದೆಲ್ಲಾ ಬದುಕಲ್ಲ, ಬದುಕ ಬಯಲು ನಿಲುಕದು ಬಯಕೆಗೆ ,ಕಷ್ಟ ಸುಖದ ದುಃಖ ದುಮ್ಮಾನವೊಂದು ಭಾಗ ಸುಖದ ಅನಾವರಣವು ವ್ಯಾಮೋಹದ ಪರದೆ ತೆರೆದಾಗ ಪರಿಧಿಯಲ್ಲಿಯೇ ಇರಲಿ ನಿನ್ನ ಸುಖದ ಯಾತ್ರೆಯು. ಶವದ ಮುಂದದೋ, ಹಿಂದದೋ ಎರಡೊಂದೇ ನಡೆಯು ಮೆರವಣಿಗೆಯಲಿ ಮುನ್ನಡೆಯ ಪರಿಗಣನೆ ಮಾತ್ರವದು ಜಗಕೆ ದೇಹ ತೇರನೇರುವ ಥರದರ್ಥದಲಿ‌ ನಿರ್ಧರಿಪು ನಿನ್ನಾ ನಿಜ ಸಹಜದಲಷ್ಟೇ ಸಾಗಿದರೆ ರಜವ ನೀಗಿ ತೇಜ ರಾರಾಜಿಸುವುದು. ರಚನೆ : ಕುಮಾರ್. ಬಿ. ಬಾಗೀವಾಳ್.