ಹನಿಗವನಗಳು
ನೇಸರ
ನಾಳೆ ನೀನೇ ಬರಬೇಕು ನೇಸರ
ಸ್ವಾಗತಕೆ, ದಿವ್ಯತೆಗೆ ಮರಳಿ
ಇರಳಲಿ ಕಳೆದ ಭವ್ಯತೆಯ ತೆರೆದಿಡಲು.
ಭೂಮಿ ಹೊದ್ದ ಹಸಿರ ತೋರಲು
ಹಕ್ಕಿ ಕೊರೊಳಲು ಗಾನ ಉಕ್ಕಲು
_ಕುಮಾರ್ ಬಿ ಬಾಗೀವಾಳ್.
ಜೂಟಾಟ.
ದಿನವೂ ನಡೆದಿದೆ ಸೂರ್ಯ ಚಂದ್ರರ
ಜೂಟಾಟ
ಹಾಗಾಗಿಯೇ ಬೆಳಗು ಕತ್ತಲೆಯ
ನೆರಳಾಟ.
- ಕುಮಾರ್ ಬಿ ಬಾಗೀವಾಳ್
ಹೊಡೆದವರಾರು ಚಂದಿರನ
ಚೆಲ್ಲಿದೆ ಬೆಳಕು ಅಂಗಳ ತುಂಬ
ಹಾಲಾಗಿ,
ಕರೆದವರ್ಯಾರೋ ಹಾಲನು ಇಲ್ಲಿ
ಕೇಳಿದ ಪುಟ್ಟ ಪ್ರಶ್ನೆಯ ಸಾಲಾಗಿ.
ಪೂರ್ಣ ಚಂದಿರನ ಬೀಳಿಸಿ
ಹೊಡೆದವರ್ಯಾರೋ ಹೋಳಾಗಿ.
_ ಕುಮಾರ್ ಬಿ ಬಾಗೀವಾಳ್
ಜಾರಿದ ಸೂರ್ಯ.
ಗಿರಿ ತುದಿಯಲಿ ಮೂಡಿದ ಸೂರ್ಯ
ಹಾರಿದ ಬಾನಿಗೆ ಪಟವಾಗಿ
ಸೂತ್ರವ ಎಳೆದ ಮರುಕ್ಷಣವೇ
ಮುಳುಗಿದ ಕಡಲಲಿ ಸ್ಪುಟವಾಗಿ.
_ ಕುಮಾರ್ ಬಿ ಬಾಗೀವಾಳ್.
ಬಾರೋ ಚಂದಿರ
ಬಾರೋ ಚಂದಿರ
ಬಾರೋ ಚಂದಿರ
ತೋರೋ ಸುಂದರ ಮೊಗವನು ಈಗಲೆ,
ಕಾರೋ ಬಿಸಿಲಲಿ ಸೊರಗಿರೋ
ಮೋರೆಗೆ ತಂಪನು ತಾರೋ ಸಲುವಾಗಿ.
Comments
Post a Comment