ಹನಿಗವನಗಳು

 ನೇಸರ

ನಾಳೆ ನೀನೇ ಬರಬೇಕು ನೇಸರ

ಸ್ವಾಗತಕೆ, ದಿವ್ಯತೆಗೆ ಮರಳಿ 

ಇರಳಲಿ ಕಳೆದ ಭವ್ಯತೆಯ ತೆರೆದಿಡಲು.

ಭೂಮಿ ಹೊದ್ದ ಹಸಿರ ತೋರಲು

ಹಕ್ಕಿ ಕೊರೊಳಲು ಗಾನ ಉಕ್ಕಲು

_ಕುಮಾರ್ ಬಿ ಬಾಗೀವಾಳ್.


ಜೂಟಾಟ.

ದಿನವೂ ನಡೆದಿದೆ ಸೂರ್ಯ ಚಂದ್ರರ

ಜೂಟಾಟ

ಹಾಗಾಗಿಯೇ ಬೆಳಗು ಕತ್ತಲೆಯ

ನೆರಳಾಟ.

- ಕುಮಾರ್ ಬಿ ಬಾಗೀವಾಳ್


ಹೊಡೆದವರಾರು ಚಂದಿರನ

ಚೆಲ್ಲಿದೆ ಬೆಳಕು ಅಂಗಳ ತುಂಬ

ಹಾಲಾಗಿ, 

ಕರೆದವರ್ಯಾರೋ ಹಾಲನು ಇಲ್ಲಿ

ಕೇಳಿದ ಪುಟ್ಟ ಪ್ರಶ್ನೆಯ ಸಾಲಾಗಿ.

ಪೂರ್ಣ ಚಂದಿರನ ಬೀಳಿಸಿ 

ಹೊಡೆದವರ್ಯಾರೋ ಹೋಳಾಗಿ.

_ ಕುಮಾರ್ ಬಿ ಬಾಗೀವಾಳ್


ಜಾರಿದ ಸೂರ್ಯ.

ಗಿರಿ ತುದಿಯಲಿ ಮೂಡಿದ ಸೂರ್ಯ

ಹಾರಿದ ಬಾನಿಗೆ ಪಟವಾಗಿ

ಸೂತ್ರವ ಎಳೆದ ಮರುಕ್ಷಣವೇ

ಮುಳುಗಿದ ಕಡಲಲಿ  ಸ್ಪುಟವಾಗಿ.

_ ಕುಮಾರ್ ಬಿ ಬಾಗೀವಾಳ್.


ಬಾರೋ ಚಂದಿರ

ಬಾರೋ ಚಂದಿರ 

ಬಾರೋ ಚಂದಿರ

ತೋರೋ ಸುಂದರ ಮೊಗವನು ಈಗಲೆ,

ಕಾರೋ ಬಿಸಿಲಲಿ ಸೊರಗಿರೋ

ಮೋರೆಗೆ ತಂಪನು ತಾರೋ ಸಲುವಾಗಿ.

Comments

Popular posts from this blog

ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು?

ಅಕ್ಕಮಹಾದೇವಿಯವರ ಆಯ್ದ ವಚನಗಳು. Selected Vachanas of Akkamahadevi.

ವೃತ್ತಗಳು CIRCLES