Posts

ಹಣಾಹಣಿಯಿ ಮಣಿವುದು ಅಪರಾದವೇ?

  ಹಣಾಹಣಿಯಿ ಮಣಿವುದು ಅಪರಾದವೇ? ಹಣಾಹಣಿಯಲಿ ಮಣಿಯುವುದು ಅಪರಾದವೇ? ಅಣಿಯಾಗಲು,ಹೊಣೆಗಾರಿಕೆ ಹೊರಲಲ್ಲವೇ. ಅವಲೋಕಿಸಲು ಇದು ಸರಿಸಮಯ ಎನಲು ತಾನೆ ಹೆಣೆ ಜಯದ ಹಗ್ಗವನು ,ಹಿಡಿದೇಳು ಪುಟಿದು ನಿಲ್ಲುವವರೆಗು. ಕಡೆಗಣಿಸದಿರು ಪರಿಶ್ರಮದ ಬದುಕನು ನಡೆ ಕಡೆವರೆಗು ಗೆಲುವ ಬೆನ್ನತ್ತಿ ಗುರಿಯೆಡೆಗೆ. ಪಡೆವೆ ಹೊಸದೆ ಜಯಾಮೃತವನೆ ಅಮರ ಕೊನೆಗೆ ಹೆಡೆಯೆತ್ತಿ ನಡೆ ಮಣಿಯದಿರು ಸಂದರ್ಭಕೆ. ಹೊಡೆದರೆ ಹಾಲು ಹಾಲಾಗದು  ಹಾಳಾಗುವುದು ಮಡಿದರೆ ಮಣ್ಣಾಗುವುದು ನಿಶ್ಚಿತವಲ್ಲದೆ ಮತ್ತೇನು ನಡೆ ನಡೆ ಗೆಲುವು ನಿನ್ನದೆ ಒಲವಿಡು ಮನಬಲದ ಮೇಲೆ ಪಡೆ ಜಯದ ಮಾಲೆಯನು ಕೊರಳಿಗೆ,ಮೆರೆ ನೆರೆ ಹೊರೆ ಮೆಚ್ಚುವ ಹಾಗೆ.   ರಚನೆ: ಕುಮಾರ್ ಬಿ ಬಾಗೀವಾಳ್

ಅವಿಚ್ಛಿನ್ನ ನಡೆ ನನದೇ...

  ಅವಿಚ್ಛಿನ್ನ ನಡೆ ನನದೇ... ಗೆಲುವು ನಡೆಯಲೆದ್ದಾಗ ತಡೆಗಾಲುಗಳೇ ಹೆಚ್ಚು ತನ್ನಷ್ಟಕ್ಕೆ ತಾನೇ ಗೆಲುವಿನೊಲವ ತಡೆವ ಹುಚ್ಚು ಬಿಡದೆ ಗೆಲುವೆ ತಡೆದ ಕಾಲನೇ ಗಾಲಿಯಾಗಿಸಿ ಬಿನ್ನವಾಗಿದ್ದರೆ ಎದುರು ಅವಿಚ್ಛಿನ್ನ ನಡೆ ನನದೇ. ಮನಸು ಖುಷಿಯನೊತ್ತು ಸುತ್ತುವಾಗಲೆಲ್ಲಾ ಹುಸಿ ಕನಸುಗಳ ಸಂತೆಯ ಜನಜಂಗುಳಿಗಳು ಬಿರುಸಾಗಿ ಒದರಿ ನಿಂತು ಸೊಗಸಾಗಿ ನಲಿಯುವೆ ಹಸಿರಾಗಿದ್ದರೆ ಉದುರು ಮಳೆಗೆ ಅವಿಚ್ಛಿನ್ನ ಬೆಳೆ ನನದೇ. ಹುಲುಸಾಗಿ ತೆನೆಯೊತ್ತು ಮೈದುಬಿದೆದೆ ಮೆರೆವಾಗಲೆಲ್ಲಾ ಹೊಲಸು ಮಳೆಗೆ ಸುರಿದು ಗರ್ಭದೊಳಿಳಿದು ಪಾತಿಸುವ ಮನಸು ಗರಿಯ ಮುಚ್ಚಿ, ಧೃಡತೆ ಹೆಚ್ಚಿ ಹಡೆದೇ ಹಡೆವೆ  ಹಸಿದೊಡಲ ತುಂಬಿಸುವೆ  ಅವಿಚ್ಛಿನ್ನ ತೃಪ್ತಿ ನನದೆ. ಸಾರಿ ಹೇಳುವ ಸಾಧನೆಯ ಎಂದೆನ್ನುವಾಗಲೇ  ಭಾರೀ ಕರಿನೆರಳ ಛಾಯೆಯಾವರಿಸುವ ಹುಚ್ಚು ತವಕ ಭಾವುಕನಾಗದೇ, ಭಾಷ್ಪವಾಗದೇ ನಿಶ್ಚಿತ ಸಾಗುವೆ ಸಾಧನೆಯ ಶಿಖರವನೇರೇ ಏರುವೆ ಅವಿಚ್ಛಿನ್ನ ಜಯ ನನದೆ . ರಚನೆ : ಕುಮಾರ್ ಬಿ ಬಾಗೀವಾಳ್

Home and kitchen

Image
HOME AND KITCHEN APPLIANCES 1) Butterfly COOKER       2) All new TV's Reason to buy To buy click the down link https://amzn.to/3fEYVZM

ಹೊಚ್ಚ ಹೊಸ ಕನಸು ಇನಿಯ

  ಹೊಚ್ವ ಹೊಸ ಕನಸು ಇನಿಯ. ಹೊಚ್ಚಹೊಸ ಕನಸು ಇನಿಯ ಅಚ್ಚಳಿಯದ ಪಚ್ಚೆ ಹಸಿರು ಮುಚ್ಚಳಿಕೆ ಬರೆದು ಕೊಟ್ಟಿದೆ ಸಾಕ್ಷಿಗೆ. ಮನಸುಖಿಸುವ ಮೆಲ್ಲಮಾತನೊಮ್ಮೆ ಕೇಳಿದ ಆ ಹೊಂಗೆ ಮರವು ಹರಸುವೆನೆಂದು ಹೇಳಿ ಈ  ಭೃಂಗದ ಬೆನ್ನನೇರಿ ಬಂದಿದೆ. ಮುಂಗುರುಳಿಗೆ ಮನವ ಸೋತ  ಆ ಮಲ್ಲಿಗೆ ಮುಡಿಯನೇರಿ ಮದವೇರಿದ ಚೆಲುವು ಕೊಟ್ಟು ಮಧುವ ತುಂಬಲು ತಾ ಬಂದಿದೆ ಮೈಸೋಕಿಸೊ ಹಠಕೆ ಬಿದ್ದ ಈ ಪರ್ಣವು ಮೈನೋಯದೆ ಹಣ್ಣಾಗಿ ಬಿದ್ದು ನೆಲವ ಸೇರಿ   ಮೃಧುವಾಗಿದೆ ಈ ಪಲ್ಲಂಗದಿ. ಹೇಮಂತಕು ಬಿಸಿಯಾಗುವ ಆಸೆ ಹುಟ್ಟಿದೆ, ಸುಡು ಬೇಸಿಗೆಯಲು ಮತ್ತೊಮ್ಮೆ ಮೈಯ ಚಾಚಿ ಮಗ್ಗುಲಾಗಿ ನಾಚಿಕೆಯಲಿ ನೆಲಕಚ್ಚಿದೆ. ಮಧುವನೀರೊ ಪರಿಯ ನೋಡಿ ಆ ಧುಂಬಿಗೆ ಪುಷ್ಪವೊಂದು ಪಾಠ ಹೇಳಿ ತಿಳಿ ನೀನು ಈ ಕಲೆಯ ಎಂದು ಹೇಳಿ ತಲೆಬಗ್ಗಿಸಿ ಮೌನವಾಗಿದೆ. ರಚನೆ : ಕುಮಾರ್. ಬಿ.ಬಾಗಿವಾಳ್

Class 9th Sethubanda by DD Chandana 20/07/2020

Class 9th setubanda ಸೇತುಭಂಧ classes by DD Chandana 20/07/2020 ವೀಕ್ಷಿಸಲು ಈ ಕೆಳಗಿನ ಲಿಂಕ್ ನ್ನು ಒತ್ತಿ. https://youtu.be/vSN0h1EeMJw
Image
Dabur Sanitize γ - Hand Sanitizer | Alcohol Based Sanitizer - 450 ml Visit the DABUR Store 4.0 out of 5 stars         442 ratings |  37 answered questions M.R.P.: ₹ 225.00   Price: ₹ 202.00 Deal Price: ₹ 155.00   Fulfilled FREE Delivery  on orders over ₹ 499.00 .  Details You Save: ₹ 70.00 (31%) Inclusive of all taxes Delivery by:  Thursday, July 23  Details No-Contact Delivery Not Returnable Amazon Delivered Deal is  63%  Claimed Sold by  Cloudtail India  and  Fulfilled by Amazon . 2 offers  from  ₹ 202.00 Dabur Sanitize - hand sanitizing rub protects from germs without the use of soap & water It has 60% (w/w) Alcohol Content which is equivalent to 70 % (v/v) Alcohol Content making it effective against the ...

Badukuva chalavanna balagolisiddu nannappa

ಬದುಕುವ ಛಲವನ್ನ ಬಲಗೊಳಿಸಿದ್ದು ನನ್ನಪ್ಪ…. ನನಗೆ ಚೆನ್ನಾಗಿ ನೆನಪಿದೆ ನಾನು ನನ್ನ ಜನನದ ನಂತರದ ಕೆಲವರ್ಷಗಳು ಒಂದೇ ಊರಿನ ನನ್ನಜ್ಜಿಯ ಮನೆಯಲ್ಲಿ… ಅರಿವು ಮೂಡಿದಾಗ ಅದು ಯಾಕೆಂಬ ಕಾರಣ ತಿಳಿದಾಗ ಆಶ್ಚರ್ಯ. ಮಕ್ಕಳನ್ನ ಮನೆಯಲ್ಲೇ ಬಿಟ್ಟು ಸೂರ್ಯನಿಗೂ ಮೊದಲೇ ನಮಗಾಗಿ ಅವರ ಕಾಯಕ ಮರದ ಮೇಲೆ, ಅದು ಹೊಂಗೆ,ಹುಣಸೆ, ಸೀಗೆ… ಹೀಗೆ. ಅದರಿಂದ ಸಂಜೆಯವರೆಗೂ ದುಡಿದರೂ ಬರುವ ಕೈಗಾಸು ಮಕ್ಕಳನ್ನು ಸಾಕಿ, ಮಿಕ್ಕ ಹಣದಲ್ಲಿ ಚಿಕ್ಕ ಚಿಕ್ಕ ಗುಂಟೆಗಳ ಲೆಕ್ಕದಲ್ಲಿ ಜಮೀನು ಖರೀದಿಸಿ ಇಂದು ಮಕ್ಕಳ ಬದುಕಿಗೆ ಸಾಕಾಗುವಷ್ಟು ಜಮೀನು ಮಾಡಿ ಹನಿ ಹನಿಗೂಡಿದರೆ ಹಳ್ಳ ಎಂಬ ಗಾದೆಗೆ ಪೂರಕ ನಿದರ್ಶನವಾದರು ನನ್ನಪ್ಪ. ತಾವು ಅನಕ್ಷರಸ್ಥರಾದರೂ ಜ್ಞಾನದಲ್ಲಿ , ಸಮಯಪ್ರಜ್ಞೆಯಲ್ಲಿ, ಬದುಕನ್ನು ಸಮರ್ಥವಾಗಿ ನಡೆಸುವಲ್ಲಿ, ಮುನ್ನುಗ್ಗುವುದರಲ್ಲಿ   ಯಾರಿಗೂ ಕಮ್ಮಿ ಇಲ್ಲ ನನ್ನಪ್ಪ. ನಿಷ್ಕೃಷ್ಟವಾಗಿ ಕಂಡ ಜರಿವ ಜನರ ಎದುರು ಗದರಿನಿಂತ ನನ್ನಪ್ಪ ನನ್ನ ಇಂದಿನ ಸ್ಥಿತಿಗೆ ಕಾರಣ. ಬಂದ ಅವಕಾಶಗಳನ್ನು ಸದ್ಬಳಕೆ ಮಾಡಿಕೋ ಎಂಬ ಗಾದೆಮಾತಿಗೆ ಅನ್ವರ್ಥ ನನ್ನಪ್ಪ. ನನ್ನ ಓದಿಗೆ ಸಂಪೂರ್ಣ ಬೆಂಬಲಿಸಿ ನನ್ನಮ್ಮನೊಡಗೂಡಿ ಬಿಡಿಗಾಸನ್ನೂ ತಮಗಾಗಿ ವೆಚ್ಛ ಮಾಡದೇ ನನಗಾಗಿಯೇ ವ್ಯಯಿಸಿದ ನನ್ನಪ್ಪ ಒಬ್ಬ ಅಕ್ಷರ ಸಂತ. ಛಲಕ್ಕೇ ಬದುಕಿದ ನನ್ನಪ್ಪನ ಒಂದು ಮಾತು ಇನ್ನೂ ಮುಂದೂ ನನಗೆ ಸ್ಪೂರ್ತಿ ಅದು " ಮಗನೇ ಅವರು ಅವರ ಮನೆ ಮುಂದೆ ಕಾಯಿ ಹೊಡೆದರೆ ನೀನು ಕಂಠವನ್ನಾದರೂ ಮನೆಯ ಮುಂದೆ...