Posts

ಅಮ್ಮಾ ... ನೀನೆ ಶ್ರೇಷ್ಠ. Amma neene shreshta a poem by Kumar B Bagival

google.com, pub-1254641642343099, DIRECT, f08c47fec0942fa0  ಅಮ್ಮಾ... ನೀನೇ ಶ್ರೇಷ್ಠ. (ವಿಶ್ವ ಅಮ್ಮಂದಿರ ದಿನದ ಶುಭಾಶಯಗಳೊಂದಿಗೆ) ಅಮ್ಮಾ ನೀನೆ ಶ್ರೇಷ್ಠ ಜಗದಗಲಕೂ , ನಿನ್ನೊಡಲೇ ಶ್ರೇಷ್ಠ ಜಗದ ಅಗಲದಲ್ಲೂ ಕಡಲಿಗೂ ಮಿಗಿಲು ಭೋರ್ಗರೆತವಿಲ್ಲ ಆಗಸಕೂ ಮಿಗಿಲು ಗುಡುಗಾರ್ಭಟಗಳಿಲ್ಲ ಭುವಿಗೂ ಮಿಗಿಲು ನಡುಗು ಕುಸಿತಗಳಿಲ್ಲ‌. ಅಮ್ಮಾ ನೀನೇ ಶ್ರೇಷ್ಠ ಜಗದಗಲಕೂ , ನಿನ್ನ ಮಡಿಲೇ ಶ್ರೇಷ್ಠ ಜಗದ ಅಗಲದಲ್ಲೂ ಸುಡುವ ಕೆಂಡವೂ ಅಲ್ಲ, ಕೊರೆವ ಚಳಿಯೂ ಇಲ್ಲ ಬಾಡುವ ಹೂವೂ ಅಲ್ಲ  ತೊರೆವ ಕಾಲವೂ ಅಲ್ಲ ಎಲ್ಲಕೂ ಮಿಗಿಲು ಅದುವೆ ಪೊರೆವ ದೈವ ನೆಲೆಯು. ಅಮ್ಮಾ ನೀನೇ ತಾನೆ ಜಗದಗಲಕೂ ಶ್ರೇಷ್ಠ, ನಿನ್ನ ಕೈತುತ್ತೇ ಶ್ರೇಷ್ಠ ಜಗದ ಅಗಲದಲ್ಲೂ ಅಮೃತಕೂ ಮಿಗಿಲು ತಾರತಮ್ಯಗಳಿಲ್ಲ ಬಿತ್ತೋ ಬೀಜಕು ಮಿಗಿಲು ಹುಸಿಯುವ ಮಾತೇ ಇಲ್ಲ ಉತ್ತ ನೆಲಕೂ ಮಿಗಿಲು ತನುವು ಹಾರುವುದೇ ಇಲ್ಲ. ಅಮ್ಮಾ ನೀನೇ ಶ್ರೇಷ್ಠ ಜಗದ ಅಗಲದಲ್ಲೂ ಗುರುವಿಗೂ ಮಿಗಿಲು ಮೊದಲ ಗುರು ನೀನೆ ಹರನಿಗೂ ಮಿಗಿಲು ಪೊರೆವವಳು ನೀನೇ ತಾನೆ ವರಕ್ಕೂ ಮಿಗಿಲು ಹುಸಿಯದ ವರವನೀಡುವವಳು ನೀನೆ ಕರ ಮುಗಿವ ಪ್ರತಿ ಗಳಿಗೆ ಸಲ್ಲುವುದು ಜಗದಿ ನಿನಗೆ ತಾನೆ. ರಚನೆ : ಕುಮಾರ್ ಬಿ ಬಾಗೀವಾಳ್. google.com, pub-1254641642343099, DIRECT, f08c47fec0942fa0

ತುಡಿತ Thuditha a poem by Kumar B Bagival

 ತುಡಿತ.. ನೆನೆದ ಮರುಗಳಿಗೆಯಲಿ ಮರಳಿ ಬರುವೆ. ಮನದ ಅನತಿಯಲೆ ಸುಳಿದು ಮೆರೆವೆ. ತೊರೆದು ಹೇಗಿರಲಿ ನವಿರ ಸವಿ ಸಖ್ಯವ ಬೇರೆಲ್ಲವು ಈ ಜಗದಲಿ ನನಗೆ  ನಿನಗಿಂತ ಮುಖ್ಯವಾ? ಅರೆಗಳಿಗೆ ಮರೆತರೂ ಹೊರಳಡಿ ನರಳುವೆ ಸೆರಗಿನಂಚಿನ ಬಂಧಿಯಲಿ ಸೆರೆಯಾಗುವೆ ಸೂರೆ ಹೋಗಿದೆ ಮನಸು ನಿನ್ನ ದಾಳಿಯಲಿ ಸಾರಿ ಹೇಳುವೆ ಎಲ್ಲೂ ಎಲ್ಲೆಲ್ಲೂ ಎಲ್ಲಾ ಪಾಳಿಯಲಿ. ಮಹಾ ಕೂಗದು ನನಗೆ ನಿನ್ನ ಮನದ ಕರೆ ಮೋಹ ಯಾಕದೋ ಗೊತ್ತಿಲ್ಲ ಅದು ಖರೆ ಸುಖಾಸುಮ್ಮನೆ ತಿರುಗುತಿದೆ ನಿನ್ನೊಡನೆ ನನ್ನೊಲವು ಬೇಕಾಗಿದೆ ನನಗೆ ನಿನ್ನ ತುಟಿಯಂಚ ಚೆನ್ನ ಚೆಲುವು. ಕನಸಿಗೂ ಅರ್ಥ ಬೇಕಿದೆ ನನಗೀಗಲೆ ನನಸಾಗಲಿ ಅದು ವ್ಯರ್ಥವಾಗದೆ ಇಂದೀಗಲೆ ಜಪವು ನೆಪವಾಗಿದೆ ಸಂಧಿಸುವ ಕಾರಣಕೆ ನಿನ್ನ ನೆನಹದದೊಂದೇ ಹಿತವು ನನ್ನೀ ಕರಣಕೆ. ಬರುವೆ ಭರವಸೆಯ ಹೊತ್ತು ತರುವೆ ನೆರಳಾಗಿ ಬಿಡದೆ ನಿನ್ನೊಡನೆ ಸದಾ ನಾನಿರುವೆ ಮರುಳಲ್ಲ ಕೇಳಿದು ತುಡಿತವು ಹೃದಯ ಬಡಿತ ಬೆರಳಿಡಿದು ಇಡುವೆ ಸಪ್ತಹೆಜ್ಜೆಯನೆಂಬ ತುಡಿತ‌. ರಚನೆ: ಕುಮಾರ್ ಬಿ ಬಾಗೀವಾಳ್

ಮಂದಾಗ್ನಿ Mandagni a poem by Kumar B B Bagival

 ಮಂದಾಗ್ನಿ ನಿನ್ನೊಳಗಿನ ಮಂದಾಗ್ನಿಯೊಮ್ಮೆ ಉರಿಯಲಿ ಬಿಡು ಸೊನ್ನೆಯೊಳಧಿಕ ಮೌಲ್ಯವ ಕಾಣುವ ಹಾಗಿರಲಿ ಬಿಡು ಮುನ್ನಿನೊಳು ಸಾಲು ಕರೆವ ಹಸುಗಳ ಕೆಚ್ಛಲ ಹಾಲು ಹೆತ್ತು ತೈಲವಾಗುವ ಹಾಲು ಅಗ್ನಿವರ್ಧಕವಾಗೊ ಓಲು. ತೇಲುವ ಕರಿಮೋಡವೊಂದು ಬರಸಿಡಿಲ ಸಿಡಿಸಲಿ ಬಿಡು ಕಾಡುವ ಮನವೊಂದು ಬಾಡುವ ಮುನ್ನ ಮುನ್ನಲೆಗೆ ಬರಲಿ ಬಿಡು ಬಾಡುವ ಹೂವೊಂದು ಬಾಡುವ ಮುನ್ನ ಸುಗಂದವ ಸೂಸಲಿ ಬಿಡು ನೋಡುವ ನೋಟವದು ಮುಂದಿನ ದಾರಿಗೆ ರಹದಾರಿಯಾಗಲಿ ಬಿಡು. ಚಕ್ರದೊಳು ಗಾಳಿಯಾಗಲಿ ಬಿಡು ಸರಾಗ ಸಾಗಲು ಎದೆಯೊಳಗಿನ ಉಸಿರಾಗಲಿ ಬಿಡು ದೇಹ ಸಾಗಲು ಮೌನದೊಳಗಿನ ಮಾತಾಗಲಿ ಬಿಡು ಮನ ಮಾಗಲು ಬಂದಿಯಾಗಲಿ ಬಿಡು ಕೋಳವಿಲ್ಲದೆ ಮನಸ ಲೂಟಿಮಾಡಲು ರಚನೆ : ಕುಮಾರ್ ಬಿ ಬಾಗೀವಾಳ್.

School based MIS Used by different states

  Five school based MIS used by different states http://rajssa.nic.in/Home/Home.aspx http://emis.tnschools.gov.in/ https://hryedumis.gov.in/ http://epunjabschool.gov.in/ https://twsis.cgg.gov.in/ http://www.schooleducation.kar.nic.in/ About Karnataka state school based MIS . What is the URL of the MIS           http://www.schooleducation.kar.nic.in/    2.  Can it be accesed offline                      Partially    3 .  Who are the users like teachers/ students/ government officials etc? By all catagory     4.  What are the data collected?          Data about administration, children,teachers, programs,exam board           etc         5.   Wha...

ಅಂತಿಮವಾಗು… ಪರರ ಪರಪಂಚದಲಿ. Anthimavagu... a poem by Kumar B Bagival

  ಅಂತಿಮವಾಗು… ಪರರ ಪರಪಂಚದಲಿ. ನಾ ನಡೆದದ್ದೇ ಹಾದಿಯಾಗಬೇಕು  ನಾ ಕಂಡಿದ್ದೇ ನಿಜವಾಗಬೇಕು ನಾ ಕೊಂಡಿದ್ದೇ ವರವಾಗಬೇಕು ನಾ ನುಡಿದಿದ್ದೇ ಅಂತಿಮವಾಗಬೇಕು. ಎಂದಾದರೆ ಅದು ನೀನೊಬ್ಬನಿರುವ ಪರಪಂಚದಲ್ಲಿ ಮಾತ್ರ. ಬೆಳಕಾಗು ಹಾದಿಯಾಗಲು, ಕನ್ನಡಿಯಾಗು ನಿಜವಾಗಲು, ದೇವರಾಗು ವರವಾಗಲು, ಅಂತರಾತ್ಮವಾಗು ಅಂತಿಮವಾಗಲು. ಅಂದಾದರೆ ಮಾತ್ರ ನೀನಿರುವೆ ಪರರ ಪರಪಂಚದಲಿ. ರಚನೆ : ಕುಮಾರ್ ಬಿ ಬಾಗೀವಾಳ್

ಬರುವೆಯಾ ಗೆಳತಿ ಬದುಕ ಪಯಣದ ಜೊತೆ

  ಬರುವೆಯಾ ಗೆಳತಿ ಬದುಕ ಪಯಣದ ಜೊತೆ ಹೊ ರುವೆ ಪಲ್ಲಕಿಯ  ನಿನ್ನ ಸಹಿತ ನಿರಂತರ ಹಂಬಲದ ತುಮುಲ ಮನಸಿಗೊಂದಿಷ್ಟು ನೆಮ್ಮದಿಯ, ತುಂಬು ಪ್ರೀತಿಯ ತುಂಬಿ ಮೆರೆಸುವೆ ಬಿಗಿದಪ್ಪಿ ಬಿಮ್ಮನೆ. ಸರಿವ ಮೋಡಕೂ ಬಿಡುವಾಗಲೀ ಬಿಡು ಜೊತೆಗೆ ನಾನಿಲ್ಲವೆ ಸುರಿವ ಮಳೆಗಷ್ಟು ತೋಯ್ದುಬಿಡು ಹೊದುಪು ಕೊಡುವ ಬಯಕೆಯು ಬರಿಗಾಲಲೊಂದಷ್ಟು ದೂರ ನಡೆದುಬಿಡು ಹೆಜ್ಜೆಗೂ ತಳವಾಗುವೆ ಗುರಿಯೆ ನಾನಾಗಿದ್ದರೆ ನನ್ನನೊಮ್ಮೆ ಹಾಗೆ ಒಪ್ಪಿಬಿಡು. ಕಣ್ಣಳತೆಗೂ ಮಿಕ್ಕಿ ವಿಸ್ತಾರವಿದೆ ಬಾನ ಚಿತ್ತಾರ ಸಣ್ಣ ಕಣಕಣವೂ ನೆನಪಿಡುವ ಹಾಗೆ ಬದುಕು ಕಟ್ಟುವ ಸರಿ-ಬೆಸಗಳನ್ನೂ ಸರಿಯಾಗಿಯೇ ನೋಡುವೆನು ಬೆಟ್ಟದಷ್ಟಿದ್ದರೂ ಕಷ್ಟಗಳು ಇಷ್ಟಪಟ್ಟೇ ಮೆಟ್ಟಿನಿಲ್ಲುವ. ಮೊಗೆದಷ್ಟು ಮುಗಿಯದ ಸುಮಧುರ ಭಾವಗಳ ಅಲೆಗಳಲಿ ಈಜುತಾ ಸಾಗುವ ಬದುಕ ಕೊನೆವರೆಗೂ ನಾಳೆಗಳ ಪರಿವೆಯೇ ಬೇಡ ಸದ್ಯವಷ್ಟೇ ನಮದು ಸಾಧ್ಯತೆಗಳ ಗೊಡವೇ ಬೇಡ ಪರಿಪಕ್ವ ಬದುಕಿಗೆ‌. ರಚನೆ : ಕುಮಾರ್ ಬಿ ಬಾಗೀವಾಳ್.

ತಡೆಯದಿರು ಮನುಜ ಕಡಲ...

  ತಡೆಯದಿರು ಮನುಜ ಕಡಲ... ಮರಳಿ ಸರಿ ಹೋಗದು ಮನುಜ ಹದಗೆಟ್ಟಾ ಹಾಲು ಹುಳಿ ಬಂದ ಹಾಲು ಅದುವೆ ಬೇರೆಯವರ ಪಾಲು. ಹಳಿ ಬದಲಿಸಿದ ಬಂಡಿ ಮುಂದೆ ಹಿಡಿಯದು ಸಾಲು ಕಳಿಯಿತಂದು ಅದರಷ್ಟಕೆ ಬಿಡು ನೀ ಅದನು ಚಿಂತೆ ಬೇಡ. ಖುಷಿಗಾಗಿ ತಿರುಗೋದೊಮ್ಮೆ ತಿರುಗಿ ಬೀಳೋದು ಖಚಿತ ತಿರುಗುವಿಕೆಯಾ ತಡೆಯದಿದ್ದರೆ ನೀನು ಅದು ನಿನಗೇ ಉಚಿತ ಮರುಗಿ ಕೊರಗದಿರೋ ಮಂಕೆ ಅರಿತಿಲ್ಲಾ ನೀ ಜಗವ ಜಗವೆಲ್ಲಾ ಜಗಮಗ ಮಗನೇ ತಿಳಿ ಬೆಳಕ ಕಡೆಯ ಜಗವ. ತಡೆಯುಲಾದೀತೆ ಕಡಲ ರಕ್ಕಸದಲೆಯ ಕಡಲಲೇ ನೀನು ತರವಲ್ಲ ನಿನಗದು ನಿನ್ನ ಹಾದಿ ನಿನಗೆ ಸರಿದು ಬಿಡು ನೀನೆ ತಡೆಯಲಾದೀತೆ ಹರಿವ ನೀರ ಕೊಚ್ಚೆ ಸೇರದ ಹಾಗೆ  ಕೊರೆದು ಕೊಚ್ಚೆ ಸೇರುವೆನೆಂದರೆ ಸೇರಲಿಬಿಡು ಅದರ ಪಾಡಿಗೆ. ಹಣ್ಣು ಹಣ್ಣಾಗಿರುವಾಗಲಷ್ಟೇ ಅದು ನಿನ್ನ ಪಾಲು ಹಣ್ಣು ಕೊಳೆತು ನಾರಿ ಹೆಂಡವಾದರೆ ಅದು ಕುಡುಕರ ಪಾಲು. ಹುಣ್ಣು ಹೊಡೆದಮೇಲಿನ ಗಾಯದ ಗುರುತು ಶಾಶ್ವತ ಹುಣ್ಣು ಕೆರೆಯದಿದ್ದರೆ ವಾಸಿ ಮಾಸುವುದು ನಿಶ್ಚಿತ. ರಚನೆ : ಕುಮಾರ್ ಬಿ ಬಾಗೀವಾಳ್