Posts

ತುತ್ತೊಂದರ ಗಮ್ಮತ್ತು

  ಒದ್ದೊತ್ತು ತಿನ್ನುವ ತುತ್ತೊಂದು ಹತ್ತಾರು ಮಂದಿಯ ಜೀವನದ ನಿರ್ವಹಣೆಗೆ ಸಹಕಾರಿ ಎಂದರೆ ನಂಬಲೇಬೇಕಾದ ಸಂಗತಿ. ಬೆಳೆವ ರೈತನಿಗೆ ಬೆವರ ಹರಿಸುವ ಶ್ರಮ ಸಾರ್ಥಕವಾಗಬೇಕಾದರೆ ಅವನ ಜೀವನದ ಚೀಲವೂ ತುಂಬಬೇಕಲ್ಲವೇ, ನಳನಳಿಸಿ ಬೆಳೆದ ಬೆಳೆಗೆ ಬಂಗಾರದ ಬೆಲೆ ಸಿಕ್ಕಾಗ ಅವನ ಬದುಕೂ ಬಂಗಾರವಾಗುವುದಲ್ಲವೇ? ಕೊಂಡ ವ್ಯಾಪಾರಿಯೊಬ್ಬ ಪರಿಪರಿಯಾಗಿ ಶ್ರಮವಹಿಸಿ ಕ್ರಮಗೊಳಿಸಿ ಕ್ರಯಕ್ಕಿಟ್ಟಾಗ ಉತ್ತಮ ಕ್ರಯಕ್ಕೆ ಬಿಕರಿಯಾದಾಗ.     ಅವನ ಬದುಕೂ ಕೂಡ ಬಂಗಾರವೇ... https://www.youtube.com/@lamppost8803

ವಿಶ್ವಗುರು ಬಸವಣ್ಣ. VISHWAGURU BASAVANNA. An article by Kumar B Bagival.

  ವಿಶ್ವಗುರು ಬಸವಣ್ಣ.                           --ಕುಮಾರ್ ಬಿ ಬಾಗೀವಾಳ್ ಜಗತ್ತಿನ ಬಹುತೇಕ ರಾಷ್ಟ್ರಗಳು ಸಂಸತ್ ರಚಿಸಿದ್ದವೋ ಇಲ್ಲವೋ , ಸಂವಿಧಾನದ ಅರಿವು ಇತ್ತೋ ಇಲ್ಲವೋ, ಪ್ರಜಾಪ್ರಭುತ್ವದ ಅರಿವು ಇದ್ದಿತೋ ಇಲ್ವೋ, ಅದಾಗಲೇ ಕರ್ನಾಟಕದ ಕಲ್ಯಾಣದಲ್ಲಿ ಅದರ ಚಿಗುರು ಬಿಟ್ಟಿದ್ದಂತು ಸತ್ಯ, ಬೀಜ ಬಿತ್ತಿ , ನೀರೆರೆದು, ಪೋಷಿಸುವ ಮೂಲಕ ಕ್ರಾಂತಿಯನ್ನೇ ಹುಟ್ಟು ಹಾಕಿದ್ದು ಶರಣರು. ಒಂದು ಹಂತಕ್ಕೆ ರಾಜರ ಒಳ್ಳೆ ಆಳ್ವಿಕೆ ಇದ್ದಾಗ್ಯೂ ಕೆಲವರ ಕುತಂತ್ರಗಳಿಂದಾಗಿ ಒಳ್ಳೆಯ ಬೆಳವಣಿಗೆಗಳು ಸಮಾಜದಲ್ಲಿ ಚಿಗುರುವ ಮೊದಲೇ ಚಿವುಟಿ ಹಾಕುವ ಬಹಳಷ್ಟು ಮಂದಿ ಇತಿಹಾಸದಲ್ಲಿ ಅಪಾರ. ಯಾವುದೇ ಸಂಪರ್ಕ ಸಾಧನಗಳು ಇಲ್ಲದ ಅಂದಿನ ದಿನಗಳಲ್ಲಿ , ಈಗಿನ ಹಾಗೆ ಬೆಳಗಾಗುವಷ್ಟರಲ್ಲಿ ಎಲ್ಲರನ್ನೂ ತಲುಪುವುದಕ್ಕಾಗಲಿ ಪ್ತತಿಕ್ರಿಯೆ ನೀಡುವುದಕ್ಕಾಗಲಿ ಸಾಧ್ಯ ಇಲ್ಲವೇ ಇರಲಿಲ್ಲ. ತಮ್ಮ ಕಾರ್ಯಸಾಧನೆಯಿಂದ ಮಾತ್ರ ಸಾಧ್ಯವಾಗುವುದಿತ್ತು. ಅಂತಹಾ ದಿನಮಾನಗಳಲ್ಲಿ ಅದೆಂತಹಾ ಶಕ್ತಿ ಇರಬೇಕು ಆ ಕ್ರಾಂತಿಕಾರಿಗೆ? ಚಿಕ್ಕದರಿಂದಲೇ ಸೌಮ್ಯವಾಗಿ ಪ್ರಶ್ನಿಸುವ ಗುಣವುಳ್ಳವರಾಗಿ, ಮೇಲು ಕೀಳುಗಳಿಲ್ಲ ಎಲ್ಲವೂ ಮೇಲೇ, ಜಾತಿ ಜಂಜಡಗಳಿಲ್ಲ ಎಲ್ಲವೂ ಒಂದೇ, ಪುರುಷ ಸ್ತ್ರೀ ಗೆ ಬೇಧವಿಲ್ಲ ಇಬ್ಬರೂ ಸಮಾನರು, ಎಲ್ಲರಿಗೂ ಸಮಾನ ಅವಕಾಶಗಳಿವೆ ಎಂದು ಕಟ್ಟುಪಾಡುಗಳನ್ನು ದಿಕ್ಕರಿಸಿದ , ಸಮಾಜಕ್ಕೆ ವ...

ಮತ್ತೆ ಸಂಭ್ರಮ.... Matthe sambhrama a poem

  ಮತ್ತೆ ಸಂಭ್ರಮ.... ಒಮ್ಮೆಲೇ ಬೆಳಕು ಹರಿದಂತ ಅನುಭವ ಸಾಲು ಸೋಲುಗಳ ಕಂಡವಗೆ ಒಮ್ಮೆ ಗೆಲುವಿನಾ ಸಂಭ್ರಮಾ, ಕರಿಮುಗಿಲ ಒಳಗಿಂದ ಕೋಲ್ಮಿಂಚು ಚಲಿಸಿದಾ ಎಚ್ಚರಾ ಇಂದು ಕಂಡಿದೇ ಒಮ್ಮೆಲೇ, ನಿನ್ನಿಂದಲೇ. ಕಡಲೊಳಗೆ ಅಲೆಗಳಾ ಸಡಗರ ಮುಡಿಲೊಳಗೆ ಹೂಗಳಾ ಪರಿಮಳ ತುಡಿತದಲಿ ಕೊಂಚ ಇಂದು ನಿರಾಳ ಇಂದು ಕಂಡಿದೇ ಒಮ್ಮೆಲೇ, ನಿನ್ನಿಂದಲೇ. ಹಿಂಡು ಹಿಂಡಾಗಿ ಕಂಡ ಕನಸೆಲ್ಲಾ ಕಣ್ಣೆದುರು ಹೊರಟಿದೇ ಸಾಲಾಗಿ ಮಣ್ಣ ಎದೆಗೆ ಮೊದಲಾ ಮಳೆ ಚುಂಬಿಸಿದ ಅನುಭವ ಇಂದು ಆಗಿದೇ ಒಮ್ಮೆಲೇ , ನಿನ್ನಿಂದಲೇ. ಬರಿಗಾಲಲೊಮ್ಮೆ ನಡೆಯಲೇ ತುಸುದೂರ ಸುರಿದ ಹಾಗೆ ಮಳೆಯ ಹೂ ಪದರ ಸವಿನುಡಿಯು ಗುನುಗುತಿದೆ ಎದೆಯೊಳಗೆ ಇಂದು ಕಂಡಿವೇ ಒಮ್ಮೆಲೇ , ನಿನ್ನಿಂದಲೇ. - ಕುಮಾರ್ ಬಿ ಬಾಗೀವಾಳ್.

GPT TEACHERS CET SUGGESTED REFERENCE BOOKS

 SUGGESTED REFERENCE BOOKS SUBJECT: CHILD DEVELOPMENT & PSYCHOLOGY 1. Child Development - Laura.E.Berk - Phi Learning Pvt Ltd (New Delhi) 2. Adolescence - John.W.Santrock - Tata Macraw Hill Edition 3. Child Growth & Development - Hurlock.E.B (2003)- Tata Macraw Hill Edition 4. Understanding Adolescence -Sharma.N (2011) - NBT - New Delhi 5. Human Development - Asha Singh (Ed)2015 - Orient Black Swan 6. Essentials Of Educational Psychology - S.K.Mangal - Phi Publications 7. Psychological Foundations Of Education - W.N.Dandekar 8. Advanced Educational Psychology - S.Dandapani 9 Advanced Educational Psychology - K.P.Pandey 10. Educational Psychology C.L.Kundu - D.N.Tutoo 11. Psychology Of Child Development - S. Bhattacharya 12.Advanced Educational Psychology - S.Dandapani 13. Advanced Educational Psychology - S.K.Mangal 14. A Text Book Of Educational Psychology - Bhatia & Bhatia 15. Advanced Educational Psychology - Seema Sharma 16. Psychological Foundations Of Education - ...

ಸರ್ಕಾರಿ ಶಾಲಾ ಜಿ ಪಿ ಟಿ ಶಿಕ್ಷಕರ ನೇಮಕಾತಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷಾ ಸಿಲಬಸ್

 ಸರ್ಕಾರಿ ಶಾಲಾ ಜಿ ಪಿ ಟಿ ಶಿಕ್ಷಕರ ನೇಮಕಾತಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷಾ ಸಿಲಬಸ್ ಗಣಿತ ಹಾಗೂ ಜೀವ ವಿಜ್ಞಾನ ಸಿಲಬಸ್ ಗಾಗಿ ಈ ಕೆಳಗಿನ ಲಿಂಕ್ ಅನ್ನು ಒತ್ತಿ https://in.docworkspace.com/d/sIJuKjL9Z-bDakgY

ಮುರಿಯಬಾರದೇಕೆ ಮೌನ.... ನನ್ನೊಲವೇ.

  ಮುರಿಯಬಾರದೇಕೆ ಮೌನ.... ನನ್ನೊಲವೇ. ಪದಗಳೊಳಡಗಿದ ಮನವೆ ಮಾತಾಗಬಾರದೇಕೆ ನೀನು. ಮರುಕಳಿಸಿವೆ ಕಳೆದ ನೆನಪುಗಳು  ನೋಟವಾಗಬಾರದೇಕೆ ನೀನು. ಪ್ರತಿ ಹೆಜ್ಜೆಯ  ನಿರೀಕ್ಷೆಯ ಮನವೇ ದ್ವನಿಯಾಗಬಾರದೇಕೆ ನೀನು. ಉಸಿರಿನ ಪ್ರತಿ ಕಣವೂ ನಿನ್ನೆಸರಿನ ಪ್ರತಿಫಲವೇ ಸಂಭ್ರಮಿಸಬಾರದೇಕೆ ನನ್ನೊಲವೇ. ಕ್ಷಣ ಕ್ಷಣಗಳು ಕೂಡ ಮಣರಾಶಿಯ ಬರಿ ನೆನಪೇ ಮುರಿಯಬಾರದೇಕೆ ಮೌನ ನೀನು. 👉ಕುಮಾರ್ ಬಿ ಬಾಗೀವಾಳ್

ಜಂಗಮನ ಪರದೆಯ ಮೇಲೆ... Jangamna paradeya mele a poem by KUMAR B BAGIVAL

  ಜಂಗಮನ ಪರದೆಯ ಮೇಲೆ... ಬರೆದ ಅದೆಷ್ಟೋ ಹಾಳೆಗಳ ರಾಶಿ ಹರಿದ ಸ್ಥಿತಿಯಲ್ಲಿವೆ, ಹರಿಯದೇ ನಿಂತ ನೀರಿನ ಹಾಗೆ ನೊರೆ ಭರಿತ ಕೊಳೆತು ನಾರಿ. ಬರೆದಾಗಲೇ ಸರಿಪಡಿಸಿ  ಪ್ರಕಟಿಸಿದ್ದರೆ ಸಂಕಲನವೋ, ಗ್ರಂಥವೋ  ಆಗುತ್ತಿದ್ದವೇನೋ ! ಹರಡಿ ಹಳದಿಗಟ್ಟಿವೆ  ಉಸಿರಾಡಲೂ ಅವಕಾಶವಿಲ್ಲದೆ! ಇಂಗಿಹೋಗಿವೆ ಅಕ್ಷರಗಳು ಬರದ ನಾಡಿನ ರೈತನ ಕಂಗಳಂತೆ! ಬರ ಬಂದು ಬಿರುಕುಬಿಟ್ಟ ಕೆರೆಯೊಡಲಂತೆ ಬಾಯ್ಬಿಟ್ಟಿವೆ ಅಲ್ಲಲ್ಲಿ.! ಸಾಕ್ಷಿಯಾಗಿವೆ ಸೊಳ್ಳೆ, ನೊಣ, ಜಿರಳೆಗಳ ಸಂತಾನೋತ್ಪತ್ತಿಗೆ, ಹೆರಿಗೆ ಆಸ್ಪತ್ರೆಯ ಮುಂದಿನ ಗರ್ಭಿಣಿಯಂತೆ ಸಾಲಾಗಿವೆ ಜಿರಳೆಗಳು ಅಲ್ಲಲ್ಲಿ ಜಿರಳೆ ಮೊಟ್ಟೆಗಳ ಸಾಲು ! ಬರೆವ ಹುಚ್ಚಿಗೆ ಬರೆದರೆ ಹೀಗೇ ಆಗುವುದೇನೋ? ಓದಿಸಿಕೊಳ್ಳುವ ಗಟ್ಟಿತನವಿಲ್ಲದಿದ್ದರೆ, ಸಿದ್ದವಿಲ್ಲದಿದ್ದರೆ ಓದುವ ಮನಗಳು. ಜಂಗಮನ ಪರದೆಯೊಂದು ಸಿಕ್ಕಿದೆ  ಹಾಳೆಯ ಬದಲು. ಬರೆದಿರಿವೆ ಹಾಳೆಗಳ ಅಕ್ಷರಗಳನು  ಪರದೆಯ ಮೇಲೆ . ಒಂದಷ್ಟು ಸಮಾದಾನವಿದೆ  ಓದುವವರಿರುವರಿಲ್ಲಿ ಚೂರುಪಾರು. ರಚನೆ : ಕುಮಾರ್ ಬಿ ಬಾಗೀವಾಳ್.