Posts

Showing posts from June, 2020

ಮಾತಿಗೆ ಬರವಿರುವ ಜಾಗದಲಿ ಮೌನಕೇನು ಕೆಲಸ ?

ಮಾತಿಗೆ ಬರವಿರುವ ಜಾಗದಲಿ ಮೌನಕೇನು ಕೆಲಸ ? ಮಾತಿಗೆ ಬರವಿರದ ಜಾಗದಲ್ಲಿ ಮೌನಕೇನು ಕೆಲಸ ? ನೀ ದೂರವಿರು ಸಾಕಾಗಿದೆ ಮುಚ್ಚಿಟ್ಟು ಸುಟ್ಟ ಭಾವನೆಗಳ! ಕಟ್ಟೆ ಹೊಡೆದಾವು ಬೆಟ್ಟದಷ್ಟಿರೋ ಕಾಡೋ ಕನಸುಗಳು  ಬಿಟ್ಟುಬಿಡು ನನ್ನನೊಮ್ಮೆ ಬಯಲಿಗೆ ತಿರುಗುವೆ ಮನಸೋಯಿಚ್ಛೆ. ಬಿಡದಿರೆ ಸಿಟ್ಟಿಗೆದ್ದಾವು ಧಿಕ್ಕರಿಸಿ ನಿನ್ನ ಈ ಕ್ಷಣ ಹೊತ್ತಿನಲೆ. ಮಾತಿಗೆ ಬರವಿರದ ಜಾಗದಲಿ ಮೌನಕೇನು ಕೆಲಸ ? ಭೋರ್ಗರೆಯುವ ಅಬ್ಧಿ ಸ್ಥಭ್ದವಾದರೆ ತರವೆ! ಮಾರ್ದನಿಸುವ ಪಿಸುಗೋಪುರ ತುಸು ನಿಂತರೆ ಸರಿಯೇ? ಮಳೆನಿಂತರೂ ಮೌನಮುರಿವ ಮರದನಿಗಳು ದನಿಸದಿದ್ದರೆ ಹೇಗೆ? ಎಂತಾದರೂ ಸರಿಯೇ ಮುಂದಾಡುವ ಮನಧನಿಯೇ ನುಡಿವೆ. ಮಾತಿಗೆ ಬರವಿರದ ಜಾಗದಲಿ ಮೌನಕೇನು ಕೆಲಸ ? ಕರಿನೆರಳಿನಾಚೆಗೋಂಗಿರಣ ಬಯಸುವುದು ತಪ್ಪೇ! ಬರಿದಾದ ಮನದಂಗಳದಿ ರಂಗೋಲಿಯಾಕುವಾಸೆ  ಉರಿವ ನೇಸರನೊಮ್ಮೆ ಹೊರಸರಿಸಿ ಬೆಳದಿಂಗಳಾಗುವೆ ತಂಪನೆರೆವೆ ಉಸಿರಬಿಗಿಹಿಡಿದೆದೆಗೆ ಒಮ್ಮೆಲೆ ಎಲ್ಲವನು ಹೇಳಿ. ಮಾತಿಗೆ ಬರವಿರದ ಜಾಗದಲಿ ಮೌನಕೇನು ಕೆಲಸ ? ದಾರಿಯುದ್ದಕೂ ಬರಿ ಕುರುಚಲು,ಮುರುಕಲು ಸವೆದ ಹಾದಿ ಭಾರಿ ಭಾರವನೊತ್ತ ಮನದ ಮೆರವಣಿಗೆ ಬರಹೊರಟರೆ ಹೇಗೆ ಗುರಿ ಮುಟ್ಟಲು ಒಮ್ಮೆ ಹಾರೇಬಿಡುವೆ ಗಾಳಿ ಬೀಸುವ ದಿಕ್ಕಿಗೊಮ್ಮೆ. ಬರಿಯ ಬಡಬಡಿಸುವ ಎದೆಯೊತ್ತು ನಡೆದ ದೇಹಕೀಗ ಭಾರವನಿಳಿಸುವೆ. ರಚನೆ : ಕುಮಾರ್ ಬಿ ಬಾಗೀವಾಳ್.

Know about SSLC – 2020 Examination Centre Demo

ಕರ್ನಾಟಕ ಸರ್ಕಾರ , ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ SSLC ಪರೀಕ್ಷೆ 2020 ನ್ನು 25/06/2020ರಿಂದ 04/07/2020 ರ ವರೆಗೆ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಯನ್ನು ನಡೆಸಬಹುದಾದ         ಪರೀಕ್ಷಾ ಕೇಂದ್ರದ ಮಾದರಿ ಹೊಂದಿರುವ ವಿಡಿಯೋವನ್ನು  ಯೂಟ್ಯೂಬ್ನಲ್ಲಿ ಅಪ್‌ಲೋಡ್ ಮಾಡಿದ್ದು  ಆ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ. https://youtu.be/RXZ6l1qzToE

Can I follow light path. ..BELAKA DAARI SARIYE ? An article by Kumar B Bagival

ಬೆಳಕ ದಾರಿ ಸರಿದಾರಿಯೇ….? ಸಂದರ್ಭಗಳು ನಮ್ಮನ್ನ ಕೆಲವೊಮ್ಮೆ ಕಠಿಣ ಮಾಡಿಬಿಡುತ್ತವೆ , ನೇರ ನಿಷ್ಠುರದಿಂದ ನಡೆಯಬೇಕಾದದ್ದನ್ನು ಹೇಳಿಕೊಡುತ್ತವೆ. ಹಾಗೆಯೇ ನಡೆಯಬೇಕ ಅಥವಾ ಸ್ವಲ್ಪ ಫ್ಲೆಕ್ಸಿಬಲ್ ಆಗಿ ಇರಬೇಕಾ ಎಂಬ ಗೊಂದಲ ಮೂಡುವುದು ಸಹಜ. ನೇರವಾಗಿ ನಮ್ಮ ನಡವಳಿಕೆ‌ ಇದ್ದರೆ ಇತರಿಗೆ ಅದರಿಂದ ತೊಂದರೆನಾ? ಕೆಲವೊಬ್ಬರಿಗಾಗಿ ನೇರವಾಗಿ ನಿಷ್ಠುರವಾಗಿ ನಡೆಯಬಾರದ? ಯಾರು ಏನು ತಿಳಿಯುವರೋ? ಖಡಕ್ ಆಗಿರುವುದು ಎಷ್ಟರಮಟ್ಟಿಗೆ ಸರಿ? ಈ ಎಲ್ಲಾ ಗೊಂದಲಗಳಿಗೆ ಪರಿಹಾರ ಏನು? ಇತ್ಯಾದಿಗಳಿಗೆ ಪ್ರಕೃತಿ ಸಾಕಷ್ಟು ಸಲಹೆಗಳನ್ನು ತೋರಿಸುತ್ತದೆ. ವಿಜ್ಞಾನದ ಕೆಲವು ವಿದ್ಯಮಾನಗಳು ಬದುಕಿಗೆ ದಾರಿ ತೋರುತ್ತವೆ ಎಂಬುದರಲ್ಲು ಅನುಮಾನವೇ ಇಲ್ಲ.ಹಾಗಾಗಿ ಮೇಲಿನ ಗೊಂದಲಗಳಿಗೆ ಬೆಳಕು ಸರಿಯಾದ ಉತ್ತರವನ್ನ ಕೊಡುತ್ತದೆ. ಬೆಳಕು ಒಂದೇ ದಿಕ್ಕಿನಲ್ಲಿ ಚಲಿಸುತ್ತದೆ, ಅಂದರೆ ಸರಳ ರೇಖೆಯಲ್ಲೇ ಚಲಿಸುತ್ತದೆ. ಎಂದೂ ವಕ್ರ ರೇಖೆಯಲ್ಲಿ ಚಲಿಸುವುದಿಲ್ಲ. ಹೇ ಹೌದಲ್ಲವೇ ಅದು ವಕ್ರವಾಗಿದ್ದರೆ ಚೆನ್ನಾಗಿರುತ್ತಿತ್ತಲ್ಲವೇ! ಎಂದು ಯೋಚಿಸುವುದು ತರವೇ? ಹೌದು ಹೀಗೂ ಯೋಚಿಸಬಹುದು. ಯಾಕೆ ಸರಳರೇಖೆಯಲ್ಲೇ ಚಲಿಸಬೇಕು? ಅದು ವಕ್ರ ರೇಖೆಯಲ್ಲೂ ಚಲಿಸಬಹುದಲ್ಲ. ಅದು ವೈಜ್ಞಾನಿಕವಾಗಿ ಹೇಗಾದರೂ ವಿವರಿಸಲಿ ಆದರೆ ನಮಗೊಂದು ಬದುಕಿನ ಮಹತ್ವವನ್ನು ಹೇಳಿಕೊಡುತ್ತದೆ. ವಿಚಿತ್ರವೆನಿಸಿದರೂ ಅದನ್ನೊಮ್ಮೆ ನೋಡೋಣ… ಬೆಳಕು ಸರಳರೇಖೆಯಲ್ಲಿ ಚಲಿಸದಿದ್ದಿದ್ದರೆ ಹೇಗಿರುತ್ತಿತ್ತು? ಹೌದು ಅದ...

Kindle Paperwhite (10th gen) - with Built-in Light, Waterproof, 8 GB, WiFi

Image
Kindle Paperwhite (10th gen) - with Built-in Light, Waterproof, 8 GB, WiFi https://amzn.to/3e6zeAX https://amzn.to/3e6zeAX

Hodike yeke maathige... Poem by Kumar B Bagival

ಹೊದಿದಕೆ ಏಕೆ ಮಾತಿಗೆ... ಮಾತಿಗಿಳಿವ ಮುನ್ನ ಮೌನದೊದಿಕೆಯೊಳಗಿನ ಮನ ತೆರೆದು ಹೊರಗಿಣುಕಿದೆ ಕಾತುರವದಕೆ ಮಳೆಗರೆಯುವ ಮುನ್ನ ಮೋಡ ಕವಿದಂತೆ ಮೋಡ ಬಿರಿದು ಇಳೆಗೆ ಮಳೆಯೇ ಸುರಿದಂತೆ. ಬೆಳೆಯ ಮೊಳಕೆ ಹೊಳೆವ ಮುನ್ನ ಸಿಪ್ಪೆ ಸೀಳಿ ಕಳೆಯೊಳಗೊಂದೇ ಹೊನ್ನ ತೆನೆ ಹಡೆದಂತೆ ಸುಳಿಗಾಳಿಯೊಂದು  ಮುಂಗುರುಳ ಸೆಳೆದಂತೆ ಹರಡಿ ಹಾರುವ ಹಕ್ಕಿಯೊಂದರ ಗರಿಯಂತೆ. ಇರುಳು ಮುದುಡಿದ್ದ ಹೂವೊಂದು ಹಗಲಿಗೆ ಕಾತರಿಸಿ ಅ ರಳಿ ಮೈದಳೆದ ಚಲುವಿನ ಹಾಗೆ ಉರುಳೋ ಭೂಮಿ ಬೆಳಗೆದ್ದು ಬಿಸಿಲ ಮಜ್ಜನಕೆ ಕೊರಳೊಡ್ಡಿ ಇಬ್ಬನಿಯ ಮಣಿಹಾರವನೆ ಮುಡಿದ ಹಾಗೆ ಮಾತಿಗಿಳಿಯುವೆ ಮನಕೆ ಮೋಸವೆಸಗದೆ ಮಾಸುವ ಮಾತುಗಳ ಆಡಿ ತೀರುವೆನು ಹೆಚ್ಚಿನದೇನೆಂಬುದರರಿವಿಲ್ಲ ಪ್ರತಿಯೂ ಗೊತ್ತಿಲ್ಲ ಹುಚ್ಚುಮನಸಿಗಿಲ್ಲಿ ವೇದಿಕೆಯ ಸೃಷ್ಟಿಸುವೆನು. ರಚನೆ :  ಕುಮಾರ್ ಬಿ ಬಾಗೀವಾಳ್

ಹಿಡಿ ಬೆರಳ ತುದಿ... ರಚನೆ : ಕುಮಾರ್ ಬಿ ಬಿ.

Image
ಹಿಡಿ ಬೆರಳತುದಿ ತಹಬದಿಗೆ ಬರಬಹುದು... ----------------------------------------------------------------------- ನಾ ಹಿಡಿವ ಮುನ್ನ ನೀ ಹಿಡಿದರೆ ನನ್ನ ಬೆರಳ ತುದಿಯ ಬರಬಹುದು ತಹಬದಿಗೆ ಹೊಯ್ದಾಟದಾಟದೆಜ್ಜೆಯ ತಂತಿ ನಡಿಗೆ ಬರಬಹುದು ತೋಯ್ದಾಟದ ಗೇಹ ಮೋಹಾದಾಚೆಗೆ. ಸಡಿಲಿಸದಿದ್ದರೆ ಹಿಡಿದ ಬೆರಳ ನೀನು ಮಡಿವವರೆಗೂ ಕೂಡಿರುವೆ ಏನಾದರೇನು ತುಡಿತ ಮಿಡಿತ ಹೃದಯ ಬಡಿತ ಮುಡಿಪೆನು ಗುಡಿಗೋಪುರದ ಕಳಸಪ್ರಾಯವೇ ಆಗುವೆ ನಾನು. ಮಾರು ದೂರವಲ್ಲ ಪಯಣವಿದು ಅಗಣಿತ ಸಾರುವೆನು ಕೂಗಿ ಸೇರು ನನ್ನೊಡನೆ ನಿಯಮಿತ ಸುಮೇರುವಿನ ಮೇರೆ ಮೀರುವ ತವಕವಿದೇ ಹಿತ ಕುರುಹಾಗಲಿ ಇತಿಹಾಸದಲಿ ಕಾಲವಿದು ಸನ್ನಿಹಿತ. ಹದವಿರುವ ಪದಗಳ ವಿನಿಮಯದ ವೇದಿಕೆಗೆ ಕದ ಬೇಡ ದಾಟುವ ಆಚೆ ಅಲ್ಲಿಂದ ಭಾನಾಚೆಗೆ ಬದುವಿರದ ಬಯಲಾಗುವ ಬಯಕೆ ಇತ್ತೀಚೆಗೆ ಮಧುವಿರುವ ಹೂವಾಗುವಾಸೆ ಒಂದರಗಳಿಗೆ. ನಾ ಹಿಡಿವ ಮುನ್ನ ನೀ ಹಿಡಿದರೆ ನನ್ನ ಬೆರಳ ತುದಿಯ ಬರಬಹುದು ತಹಬದಿಗೆ ಕುದಿ ಮನ ಸಮ್ಮತಿಸಿ ಸುಮ್ಮನಿರಬಹುದು  ಸುದಿನ ಬರಮಾಡಿಕೊಳ್ಳಬಯಸಿ ನಿಲಬಹುದು. ರಚನೆ : ಕುಮಾರ್ ಬಿ ಬಾಗೀವಾಳ್

SCHOOL FROM HOME...

SCHOOL FROM HOME.... During this corona time all institutions are move towards online education. So we need some electronic things to study online. Here are some products which helps you... Click here to buy https://amzn.to/2Y3XFbm

Kshamisi bidu omme.... Adu Naane. A beautiful article about Environmental Day. By : Kumar B Bagival

Image
ಕ್ಷಮಿಸಿ ಬಿಡು ಒಮ್ಮೆ… ಅದು ನಾನೆ. ನೀ ಕೊಟ್ಟ ವರವೇ ಅಂತಹದ್ದು ಮಾತು ಮಾತಿಗೂ ನಾ ಉಳಿಸುವೆ ನಿನ್ನ ಎನ್ನೋ ಎಷ್ಟೋ ಮಾತುಗಳು ನಿನ್ನಲ್ಲೇ ಮುಚ್ಚಿ ಹೋಗಿರಬೇಕು. ನಿನ್ನಷ್ಟೂ ಶಕ್ತಿಯನ್ನೂ ಇಂಚಿಂಚೂ ಬಳಸಿರುವ ನಾ ಉಳಿಸಿರುವುದೇನೂ ಇಲ್ಲ. ಇದ್ದಷ್ಟೂ ದಿನ ಬಳಸಿ ದಿನದೂದಡುವ ಜಯಮಾನದವನೇ ಆಗಿಬಿಟ್ಟಿದ್ದು ನನ್ನ ದುರುಳ ನಡೆ. ನಿನ್ನಿಂದಲೇ ಪಡೆದ ಎಲ್ಲವುಗಳ ಪ್ರಭಾರಿ ನಾನಾದರೂ , ನನ್ನವೇ ಇದೆಲ್ಲಾ ಎಂದು ಬಿಂಬಿಸಿಕೊಂಡು ಇಲ್ಲದ ಅಧಿಕಾರ ಚಲಾಯಿಸಿರುವೆ. ಅಷ್ಟು ತಾಳ್ಮೆಯಿಂದಿದ್ದ ನಿನ್ನನ್ನು ಉದ್ರೇಕಿಸಿದ್ದು ನಾನೇ. ನಿನ್ನಂತರಾಳದೆದೆಯ ಜೀವ ಹಿಂಡಿದವನೂ ನಾನೆ. ನೀನೇನೇ ನನ್ನ ಮಗನಲ್ಲವೇ ಕುಡಿಯಲಿಬಿಡು ಅವನಿಲ್ಲದೆ ಮತ್ಯಾರಿಗೆಂದು ನೀಡಿದ ಎದೆಯಾಲನ್ನಷ್ಟೇ ಹೀರಲಿಲ್ಲ ನಾನು ರಕ್ತ ಸಮೇತನಾಗಿ ಹೀರಿ ನಿನ್ನಡಲ ಬರಿದಾಗಿಸಿದ್ದೂ ನಾನೇ. ನೀ ನೀಡಿದ ಹಾಸಿಗೆಯಿದ್ದಷ್ಟಕೇ ಕಾಲುಚಾಚಾದೆ ಕಾಲನೀಜಿ ಬದುಕ ಸಾಗಿಸೊ ಬರದಿ ಬಿದ್ದಿದೆ ಹಾಸಿಗೆಯಾಚೆ ಕಾಲು… ನೆತ್ತಿಯನೆಲ್ಲಾ ಬರಿದುಮಾಡಿದವ ನಾನೇ. ಕೋಟಿ ಕನಸುಗಳನ್ನೊತ್ತು ನನ್ನ ಮಿತಿಯನರಿಯದೇ ನಿನ್ನೊಡಲ ಹಸಿರ ಬಸಿರ ಕಡಿದು, ಉಸಿರಿಗೂ ಕಾಸಿಟ್ಟು ಪಡೆವ ಸ್ಥಿತಿಯನ್ನು ತಂದುಕೊಂಡಿದ್ದೂ ನಾನೇ. ನಗರೀಕರಣದ ಹೆಸರಿನಲ್ಲಿ ಅನಾಗರೀಕನಾಗಿ ವರ್ತಿಸುತ್ತಿರುವವ ಮೆರೆದೆತಾಪ್ನನು ನಿನ್ನ ಹಾಗೆ ಬಿಡದೆ ನಿನ್ನನೇ ಆಳುವೆನೆಂದೊರಟು ಮಣ್ಣು ಮುಕ್ಕಿದ್ದೂ,ಮಣ್ಣ ಕೆಳಗೆ ಸಿಕ್ಕಿದ್ದೂ,ಕೊಚ್ಚಿ ಹೋಗಿದ್ದೂಹೋಗಿದ್ದೂ, ಕೊಳ...

SSLC PUNARMANANA CLASSES BY DD CHANDANA 01,02,03/06/2020

SSLC PUNARMANANA classes 01/06/2020 English medium https://youtu.be/Lwc2KtijG9Q 02/06/2020 English medium https://youtu.be/N6CE1zZyPGc 03/06/2020 Sanskrit https://youtu.be/o9uVqTphkq0