Posts

ಕವಿಶೈಲಕ್ಕೊಂದು ಪ್ರವಾಸ , A journey towards Kavishaila , A travel guide by Kumar B Bagival

Image
  ಕವಿಶೈಲಕ್ಕೊಂದು ಪ್ರವಾಸ ಯೋಜನೆ. ಕನ್ನಡ ನಾಡಲ್ಲಿ ಸುತ್ತಾಡಿದವನು ಹಲವು ದೇಶಗಳನ್ನು ಸುತ್ತಿದ್ದಕ್ಕೆ ಸಮ ಹಾಗಾಗೆಯೇ ಹೇಳೋದು… ಕರ್ನಾಟಕ " ಒಂದು ರಾಜ್ಯ, ಹಲವು ಪ್ರಪಂಚ " ಅನ್ನೋದು. ಸಮೃಧ್ದವಾದ ನಾಡು ಭೂಮಿಮೇಲೆ ಇದ್ದಿದ್ದೇ ಆದರೆ ಅದು ಕನ್ನಡ ನಾಡು ಮಾತ್ರ ಅನ್ನೋದು ಇಲ್ಲಿರುವವರು ಮಾತ್ರ ಹೇಳೋ ಮಾತಲ್ಲ ಪ್ರಪಂಚದ ಮೂಲೆ ಮೂಲೆಗಳಿಂದ ಬಂದು ಕನ್ನಡ ನೆಲದ ಮೇಲೆ ಸುತ್ತಾಡಿದ ಪ್ರತೀ ಪ್ರವಾಸಿಗನೂ ಹೇಳೋ ಮಾತು. ಅದರಲ್ಲೂ ಪಶ್ಚಿಮ ಘಟ್ಟದ ಮೇಲೊಂದು ಮೆಲು ಪ್ರವಾಸ ಕೈಗೊಳ್ಳದಿದ್ದರೆ ಅಲ್ಲಿನ ಪ್ರವಾಸ ತಾಣ, ಪ್ರಕೃತಿ ಸೊಬಗನ್ನ ಸವಿಯದಿದ್ದರೆ ಇಲ್ಲಿನ ಕಾವ್ಯ ,ಕವಿಯ ಬಗ್ಗೆ ಅವರ ಹಿಂದಿರುವ ನೈಸರ್ಗಿಕ ಸೊಬಗಿನ ಶಕ್ತಿಯನ್ನು ಅರಿಯಲು ಸಾದ್ಯವೇ ಇಲ್ಲ. ರಸ ಋಷಿಗಳ ತಾಣ ನಿಜವಾಗಿಯೂ ಸೆಳೆಯದಿರದು ಕಣ್ಮನ.    ಅಂದ ಹಾಗೆ  "ಪ್ರವಾಸಾನುಭವ" ದಲ್ಲಿ ನಿಮ್ಮನ್ನ ನೇರ ಕವಿಮನೆ ಕವಿಶೈಲಕ್ಕೆ ಕರೆದ್ಕೊಂಡು  ಹೋಗ್ತೀನಿ ಬನ್ನಿ… ಚಿತ್ರ: ಕವಿಮನೆ  ಕೃಪೆ: ಇಂಟರ್ನೆಟ್ ಕವಿಮನೆ ಇರೋದು ಕರ್ನಾಟಕದ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಸುಂದರ ವನಸಿರಿಯ ಮಧ್ಯೆ.  ಕರ್ನಾಟಕದ ಸಾಹಿತ್ಯ ಶ್ರೀಮಂತಗೊಳಿಸಿದ , ಕವಿ ಎಂದರೆ ತಟ್ ಅಂತ ನೆನಪಾಗೋದು ಒಬ್ಬರೇ ಅದು… ಹಾ… ಹೌದು ಕುವೆಂಪು… ಅರ್ಥಾತ್ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರ ಹುಟ್ಟೂರು ಕುಪ್ಪಳಿಯಲ್ಲಿ.     ಕವಿಶೈಲ  ಕರ್ನಾಟಕದ ಪ್ರವ...

ಹುಸಿಯದೆ ನುಡಿದು ಬಿಡು ಒಮ್ಮೆ.. HUSIYADE NUDIDU BIDU OMME A poem by Kumar B Bagival

  ಹುಸಿಯದೆ ನುಡಿದು ಬಿಡು ಒಮ್ಮೆ.. ಸಲಿಗೆ ಸುಖವಲ್ಲದೆ ಸುಲಿಗೆ ಯಾಕಾಯ್ತು ನವಿರು ನುಡಿಯೆಲ್ಲವು ತಿಮಿರು ಯಾಕಾಯ್ತು  ಬೆರೆತಾ ಉಸಿರೇ.. ಹುಸಿಯದೆ ನುಡಿದುಬಿಡು..ಒಮ್ಮೆ        ಅರಳಿದ ಮೊಗ್ಗದು ಸೂಜಿಯ ಮೊನೆಯು ಯಾಕಾಯ್ತು ಮುದ ಕೊಡುವ ಕೈ ಹಿಡಿಕೆ ಬಂಧನ ಯಾಕಾಯ್ತು  ಸಹ್ಯ ಸನಿಹವು ಸಹಿಸದ ವಿಮುಖವು ಯಾಕಾಯ್ತು ಧಮನಿ ಬಡಿತವೇ .. ಹುಸಿಯದೆ ನುಡಿದುಬಿಡು..ಒಮ್ಮೆ ಬಯಸಿ ಕುಡಿದ ಅಮೃತವದು ನಂಜು ಯಾಕಾಯ್ತು.. ಜೊತೆಯ ನಡಿಗೆಯು ಹಿತವಾಗದೆ ಅಹಿತವು ಯಾಕಾಯ್ತು ಕಳೆದ ಸುಖದ ಕ್ಷಣಗಳೆಲ್ಲವು ಕೊಳೆತ ಸ್ಥಿತಿಯು ಯಾಕಾಯ್ತು ಮಾಯಾ ಮೋಹವೆ.. ಹುಸಿಯದೆ ನುಡಿದು ಬಿಡು..ಒಮ್ಮೆ ಮೊಳೆತ ಮೊಗ್ಗದು ಅರಳೊ ಮುನ್ನವೆ ಮಣ್ಣ ಪಾಲು ಯಾಕಾಯ್ತು. ಒಂದು ಅರೆಕ್ಷಣವು ಬಿಟ್ಟಿರದ ಮನಕೆ ಈ ಮುನಿಸು ಯಾಕಾಯ್ತು ತುಡಿತವಿರುವ ಹೃದಯವದುವೆ ಬಂಡೆಗಲ್ಲಿನಂತೆ ಯಾಕಾಯ್ತು ಮಿಡಿದ ಕಣ್ಣೇ..  ನೀ ಹುಸಿಯದೆ ಹೇಳಿಬಿಡು.. ಒಮ್ಮೆ ಬೀಸಿದ ಸುಳಿಗಾಳಿಯೇ… ಬಿರುಗಾಳಿಯೇ ಯಾಕಾಯ್ತು.. ರಚನೆ: ಕುಮಾರ್ ಬಿ ಬಾಗೀವಾಳ್ .

ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು?

  ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು? ಮಕರ ಸಂಕ್ರಾಂತಿ ಕುರಿತ ವೈಜ್ಞಾನಿಕ ಲೇಖನ: ಕುಮಾರ್.ಬಿ.ಬಾಗೀವಾಳ್ ಸಂಕ್ರಾಂತಿ ಅಸಲಿಗೆ ಸಂಕ್ರಮಣ. ಅರ್ಥಾತ್ ಹೇಮಂತ ಋತು,ಶಿಶಿರ ಋತುಗಳ ಸಂಧಿಕಾಲ. ಭಾರತದ ಬಹುತೇಕ ರಾಜ್ಯಗಳು ಈ ದಿನವನ್ನು ಮಕರಸಂಕ್ರಾಂತಿ ಎಂದು ಆಚರಿಸುವ  ಸಂಪ್ರದಾಯವನ್ನು ರೂಢಿಸಿಕೊಂಡು ಬಂದಿವೆ. ಪುಣ್ಯಸ್ನಾನ,ಎಣ್ಣೆಮಜ್ಜನ,ಎಳ್ಳುಬೆಲ್ಲ ಪರಸ್ಪರವಾಗಿ ಹಂಚುವಿಕೆ, ಅವರೆಕಾಯಿ, ಕಡಲೆಕಾಯಿ, ಸಿಹಿಗೆಣಸು ಬೇಯಿಸಿ ತಿನ್ನುವ, ರಾಸು ಪೂಜೆ,ಕಿಚ್ಚು ಹಾಯಿಸುವುದು ಗಾಳಿಪಟ ಹಾರಿಸುವುದು ಹೀಗೆ ಆಚರಿಸುವ ಪದ್ದತಿಗಳು ಬೆಳೆಯುತ್ತಾ ಹೋಗುತ್ತವೆ. ಅದಿರಲಿ ಇದರ ಹಿಂದಿನ ಅಸಲಿ ವಿಜ್ಞಾನದ ಅಂಶಗಳನ್ನು, ಹಾಗು ಜ್ಯೋತಿಷ್ಯದ ಅಂಶಗಳನ್ನೂ, ಸಂಪ್ರದಾಯವನ್ನು ಒಗ್ಗೂಡಿಸಿದ ದೃಷ್ಟಿಯಿಂದ ಈ ಲೇಖನ ಬರೆಯುತ್ತಿದ್ದೇನೆ. ಅಂದಹಾಗೆ ಮಕರ ಸಂಕ್ರಾಂತಿಯ ವೈಜ್ಞಾನಿಕ ಸ್ವರೂಪದ ಅಂಶವನ್ನು ಗಮನಿಸುವುದಾದರೆ ಉತ್ತರಾಯಣ ಕಾಲದಲ್ಲಿನ ಪ್ರಥಮ ಸಂಕ್ರಮಣ ಮಕರ ರಾಶಿಯಲ್ಲಿ ಎಂಬುದು. ಸ್ವಲ್ಪಮಟ್ಟಿಗೆ ವಿವರವಾಗಿ ನೋಡೋದಾದರೆ ಖಗೋಳ ದಲ್ಲಿನ ನಕ್ಷತ್ರಗಳ ಗುಂಪುಗಳನ್ನು ಬೇರೆ ಬೇರೆ ಕಲ್ಪಿತ ಆಕೃತಗಳಾಗಿ ನೋಡುತ್ತಾ ಅವುಗಳನ್ನು ನಕ್ಷತ್ರ ಪುಂಜ ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಹನ್ನೆರಡು ನಕ್ಷತ್ರ ಪುಂಜಗಳು ವೃತ್ತಾಕಾರದ ರೀತಿಯಲ್ಲಿ ಜೋಡಿಸಲ್ಪಟ್ಟಿರುತ್ತವೆ ಈ ಹನ್ನೆರಡು ನಕ್ಷತ್ರ ಪುಂಜಗಳನ್ನು ನಕ್ಷತ್ರ ರಾಶಿಗಳು ಎನ್ನುತ್ತೇವೆ. ಮೇಷ,ವೃಷಭ....ಹೀಗೆ ಇದರ...

rasa rishi

 ಬಾ ರಸ ಋಷಿಯೇ ನೋಡು ನಿನ್ನೂರ  ಸಾರಿ ಹೇಳುತಿವೆ ಸಾಧನೆಯ ಡಂಗೂರ ಸೂರನೆಂದು ಕಟ್ಟದಿರು ಎಂದವನ ಸಾಧನೆಯ ತೇರ ಎಳೆಯುತಿಹ ನಿನ್ನ ಕನ್ನಡ ಕಂದಮ್ಮದಿರ.

ದಮ್ಮವದು ನಿಲುಕದು a poem by Kumar B Bagival

  ದಮ್ಮವದು ಬೊಮ್ನನ ಮೀರಿದುದು  ನೆಮ್ಮದಿಗದು ಕಮ್ಮಿಯಿಲ್ಲದುದು  ಆಸೆಗಾಸೆಯು ಬೊಗಸೆ ತುಂಬುವ ತವಕವದು ನಿನ್ನ ದುಃಖದ ಮಡಿಲು, ಬಿಡಿಗಾಸಿನ ಸುಖವಲ್ಲ ಬದುಕು. ನುಡಿಯೆಲ್ಲವು ನಡೆಯಾಗಿ ಮುಡುಪಿಲ್ಲದ ಬದುಕದು ತಡಿಯಿಲ್ಲದ ದೋಣಿ ಪಯಣದ ಅಂಬಿಗನ ಬದುಕು ಪಡಿಯಂಚು ಹೊಟ್ಟೆ ಹಸಿದವರ ಪಾಲದು ನಿನದಲ್ಲವದು ಹಿಡಿ ಋಜುಮಾರ್ಗವನೆ ನಡೆ ಗುರಿಯಂಚಿಗೆ ನಿಜ ಪಥ ಜೀವನಕದು. ಬಯಸಿದ್ದೆಲ್ಲಾ ಬದುಕಲ್ಲ, ಬದುಕ ಬಯಲು ನಿಲುಕದು ಬಯಕೆಗೆ ,ಕಷ್ಟ ಸುಖದ ದುಃಖ ದುಮ್ಮಾನವೊಂದು ಭಾಗ ಸುಖದ ಅನಾವರಣವು ವ್ಯಾಮೋಹದ ಪರದೆ ತೆರೆದಾಗ ಪರಿಧಿಯಲ್ಲಿಯೇ ಇರಲಿ ನಿನ್ನ ಸುಖದ ಯಾತ್ರೆಯು. ಶವದ ಮುಂದದೋ, ಹಿಂದದೋ ಎರಡೊಂದೇ ನಡೆಯು ಮೆರವಣಿಗೆಯಲಿ ಮುನ್ನಡೆಯ ಪರಿಗಣನೆ ಮಾತ್ರವದು ಜಗಕೆ ದೇಹ ತೇರನೇರುವ ಥರದರ್ಥದಲಿ‌ ನಿರ್ಧರಿಪು ನಿನ್ನಾ ನಿಜ ಸಹಜದಲಷ್ಟೇ ಸಾಗಿದರೆ ರಜವ ನೀಗಿ ತೇಜ ರಾರಾಜಿಸುವುದು. ರಚನೆ : ಕುಮಾರ್. ಬಿ. ಬಾಗೀವಾಳ್.

ಸರಿ ನೀ ಸ್ವಾಗತಿಸ ಬೇಕಿದೆ ನಾಳೆಗಳ…. Get lost I Want to welcome new days.... poem by KUMAR B BAGIVAL

Image
  ಸರಿ ನೀ ಸ್ವಾಗತಿಸ ಬೇಕಿದೆ ನಾಳೆಗಳ…. ಬರಿದೇ ಸಂಖ್ಯೆಯ ನೆಪವಾಗಿ ಬಂದೆ ನೀ ಸರಿಯುವ ಕಾಲ ಬಂದಾಯಿತು ಸರಿ ನೀ ನವ ನಾಳೆಗಳ ಸ್ವಾಗತಿಸುವೆವು ನಾವು ಮರೆತು ವರುಷದುದ್ದಕೂ ಆದ ನೋವು. ದೂಷಿಸಲೂ ಆಗುತಿಲ್ಲ ನಿನ್ನ ನಾವು ಎಲ್ಲೋ ದೂರದಲ್ಲಿದ್ದವರ ಒಗ್ಗೂಡಿಸಿದೆ ಮೆರೆದು ಓಡಾಡಿದವರ ಬಗ್ಗು ಬಡಿದೆ ಸಮಯವೇ ಇಲ್ಲವೆಂದವರಿಗೆ ಸಮಯವ ನೀಡಿದೆ. ಊರ ಮರೆತು ಹೋದವರಿಗೆ ತನ್ನೂರನ್ನೆ ವರವಾಗಿಸಿದೆ ಯಾರೂ ಯಾವುದೂ ನಿನ್ನದಲ್ಲ ನೀ ಒಂಟಿ ಎಂದು ಸಾರಿದೆ ಜೀವನಕ್ಕಿಂತ ಜೀವ ಮುಖ್ಯವೆಂದರುಹಿ ಹೇಳಿದೆ ಆದರೂ ಆರಕ್ಕೇರದ ಮೂರಕ್ಕಿಳಿಯದ ಬದುಕ ನೀಡಿದೆ ಮರೆಯದೇ ನೀ ಕಲಿಸಿದ ಪಾಠವ ಹೆಜ್ಜೆ ಇಡುವೆವು ಹೊಸತೊಂದು ವರುಷಕೆ ಹರುಷದಲಿ ಶುಭವನರಸುವೆವು ನಿನ್ನೊಂದಿಗಾದ ತಪ್ಪುಗಳ ತಿದ್ದಿ ಸರಿಪಡಿಸಿ ನಡೆಯುವೆವು ಉದಯವಾಗಿಸಿ ಹೊಸ ಹೊಂಗಿರಣಗಳ gಬೆಳಕ ಹರಿಸುವವು ಹೊಸ ವರ್ಷದ ಶುಭಾಶಯಗಳೊಂದಿಗೆ   ಅನಕುಮಾರ್, ನಿಗಮಾಂತ್ ಬಾಗೀವಾಳ್, ರುದ್ವೇದ ಬಾಗೀವಾಳ್   ರಚನೆ : ಕುಮಾರ್ ಬಿ ಬಾಗೀವಾಳ್.

ಗುರುತಿಸ ಬಲ್ಲೆನಾ…. ನನ್ನೆಜ್ಜೆ ಗುರುತುಗಳ..Can I identify my footprints? poem by Kumar B Bagival

Image
  ಗುರುತಿಸ ಬಲ್ಲೆನಾ…. ನನ್ನೆಜ್ಜೆ ಗುರುತುಗಳ... ಹೆಜ್ಜೆಗುರುತುಗಳು ಕಾಣದಾಗಿವೆ ಬಂದ ದಾರಿಯುದ್ದಕೂ ಅಷ್ಟು ದೂರ ಪಯಣಿಸಿದೆನಾ ಅಥವಾ  ಪಯಣದ ದಾರಿಯನ್ನೇ ಮರೆತೆನಾ. ಅಥವಾ ಯಾರಾದರೂ ….? ಇಲ್ಲ ನನ್ನ ಹೆಜ್ಜೆಯನ್ನೇ ಮರೆವಷ್ಟು ಬೆಳೆದುಬಿಟ್ಟನಾ?    ಹುಟ್ಟಿದಾಗ ಅಮ್ಮನ ಆಲಿಂಗನ ತೊಡೆಯನೇರಿದೆ ಹುಟ್ಟಿದೊಂದಷ್ಟು ದಿನ ಅಮ್ಮನೆಜ್ಜೆ ಗುರುತುಗಳೇ ನನ್ನವು ಹೆಜ್ಜೆ ಬರುವರೆಗೂ ಮೂಡಿಸಲಾಗಲಿಲ್ಲ  ಸಾಯುವಾಗಲೂ ಯಾರೋ ನಾಲ್ಕು ಜನರ  ಹೆಜ್ಜೆ ಗುರುತುಗಳೇ ನನ್ನವಾಗವುವು ಅಲ್ಲೂ ನನ್ನವೇನಿಲ್ಲ       ಈ ನಡುವಿನವಷ್ಟೇ ನನ್ನವು ಅವೂ ಕೆಲವು ಅಸ್ಪಷ್ಟ ಸ್ಪಷ್ಟವಾಗಿ ಇಟ್ಟ ಹೆಜ್ಜೆಗಳೂ ಮಾಸಿ ಹೋದಂತಿವೆ ಅವಿದ್ದರೆ ಬೆರಳೆಣಿಕೆಯಷ್ಟು ಮಾತ್ರ  ಅವುಗಳೂ ಬೇರೆಯವರ ಹಿಂಬಾಲಿಸಿ ಅವರದೇ ಗುರುತಂತಿವೆ.  ಸ್ವಂತಿಕೆಯೇ ಇಲ್ಲದ ಮೇಲೆ ಗುರುತಿಸುವುದಾದರೂ ಹೇಗೆ ನಾನವನ? ಹೋ ,  ತಡಿ ತುಡಿತವೇ ಹೃದ್ಬಡಿತ ನಿಲ್ಲುವುದರೊಳಗಾಗಿ ಅಡಿಯನಿಡು ನನ್ನದೇ ಮನ ಗುರುತಿಸುವ ಹಾಗೆ  ಲೋಕ ಗುರುತಿಸುವ ಮುನ್ನ ನನ್ನ ನಾ ಗುರುತಿಸ ಬೇಕಿದೆ ಹೆಜ್ಜೆಗೆ ಗೆಜ್ಜೆ ಕಟ್ಟುವೆ ಎಚ್ಚರದಿ ನಡೆಯಲೆಂದು  ಮರೆತರೂ ಮೊರೆತು ಹೇಳಲಿ ಅದು ನನ್ನ ಇರುವಿಕೆಯನು. ರಚನೆ ,: ಕುಮಾರ್ ಬಿ ಬಾಗೀವಾಳ್