Posts

ಪ್ರತೀಕ್ಷೆ….. a poem by KUMAR B Bagival

ಪ್ರತೀಕ್ಷೆ….. ಕಾಣದ ಚಡಪಡಿಕೆ ಒಮ್ಮೆಲೇ ‌‌‌‌.. ಬಾಣದ ತೀಕ್ಷ್ಣತೆ ಈ ಕಣ್ಣಲೇ ಬಂದುಬಿಡು ಕಣ್ಣ ಮುಂದೆ ಹಾಗೇ ಮರುಕಳಿಸಿ. ನಿನಗೊಪ್ಪಿದ ದೇಹ ನಿನಗಾಗಿಯೇ ಈ ಗೇಹ ಒಪ್ಪಿಸಿಕೊಂಡುಬಿಡು ಒಮ್ಮೆಲೆ ಸುಮ್ಮನೆ ಅಪ್ಪಿಕೊಳುವ ಬಯಕೆ ನನಗೆ ಬಿಮ್ಮನೆ ಬಿಡಲೊಲ್ಲೆ ಹಿಡಿದ ಕೈಬೆರಳ ಬೇಡಿಕೆಯೊಂದೆ ನನದು ಸುಳಿ ಸನಿಹ ಮರಳಿ ನಡೆದು ಸಾಗಬೇಕಿದೆ ನಿನ್ನೊಟ್ಟಿಗೆ ಒರಳಿ ಹರಳುರಿವ ನಿನ್ನ ಮಾತಿಗೆ ಸೋತು ಬೆರಳಿಡಿವ ಮನಸಾಗಿದೆ ನನಗೆ  ಕೊರಳೊಡ್ಡು ನೀ ಸ್ವಂತವಾಗುವೆ ಈಗಲೆ. ಚೆಂದ ಹೆಚ್ಚಿಸ ಬೇಕಿದೆ ಜಗದ ನಿಂದ ಕ್ಷಣದಲೇ ನಿನ್ನಿಂದಲೆ ಬೆಂದ ಗರಿಕೆ ಚಿಗುರಿ ನಿಂತಿದೆ ಹಸಿರ ಚೆಲ್ಲಿ ಇಲ್ಲಿ. ಭಾನಿಗೂ ಈ ಬಾಳಿಗೂ ಏನೊ ಸಂಬಂಧವು ತಂಬೆಲರಿಗೂ ನಿನ್ನ ಮೋಹಕೂ ಏನೋ ಸಂಬಂಧವು ಬಂದು ಬಿಡು ಒಮ್ಮೆಗೆ ಪ್ರತೀಕ್ಷಿಸೋ ನನ್ನೊಂದಿಗೆ ಮನಕೆ. ರಚನೆ : ಕುಮಾರ್ ಬಿ ಬಾಗೀವಾಳ್

APPA..... An article about father and his daughter

Image
  ಅಪ್ಪ... ಅಪರಿಮಿತ ಪಾತ್ರಧಾರಿ ‌ಪ್ರತೀ ನಡಿಗೆಯೂ  ಅಪ್ಪನ ಹಾಗೆ , ನಗು, ಅಳು ಅಪ್ಪನ ಹಾಗೆ. ಅಪ್ಪನ ಹೆಗಲ ಮೇಲೆ ಅಂಬಾರಿಯಷ್ಟೇ ಖುಷಿ, ಅಪ್ಪನ ಕೈಹಿಡಿಕೆ ಜಗತ್ತಿನ ಯಾವುದೇ ಭದ್ರತೆಗಿಂತ ಮಿಗಿಲು. ಹೀಗೆ ಅಪ್ಪ ಅಪರಿಮಿತ ಪಾತ್ರಧಾರಿ. ನೆಲದ ಮೇಲಿನ ಯಾವುದೇ ಪ್ರೀತಿ ಅಪ್ಪ ಮಗಳ ಪ್ರೀತಿಗೆ ಹೋಲಿಕೆ ಅಸಾಧ್ಯ.. ಅದೆಷ್ಟೇ ಎತ್ತರದ ಸಾಧಕರ ಸಾಲುಗಳ ಮುಂದೆ ಅಪ್ಪನ ಸಾಧನೆಯೇ ಎತ್ತರ.ಅದೆಷ್ಟೇ ಸುರಕ್ಷತೆಯ ನಡುವೆ ಅಪ್ಪನ ಸುರಕ್ಷತೆಯೇ ಶ್ರೇಷ್ಠ. ಅಪ್ಪನ ಮೇಲಿನ ನಂಬಿಕೆ ಜವಾಬ್ದಾರಿಕೆಗೆ ನಾನು ಎಲ್ಲೋ ಓದಿದ ನೆನಪೊಂದನ್ನು ಹಂಚಿಕೊಳ್ಳಬಯಸುತ್ತೇನೆ ಕೇಳಿ. ಒಂದು ಕಡಲ ಕಿನಾರೆ ಅಲ್ಲಿ ಅಪ್ಪ ತನ್ನ ಪುಟ್ಟ ಮಗಳನ್ನು ಕರೆದುಕೊಂಡು ಮಗಳಿಗೆ ಕಡಲನ್ನು ತೋರಿಸುತ್ತ ಕಾಲಿಗೆ ಒದ್ದೆಯಾಗುವಷ್ಟು ನೀರಿನಲ್ಲಿ ನಡೆಸಾಡುತ್ತಿರುತ್ತಾನೆ. ಸ್ವಲ್ಪ ಸಮಯದಲ್ಲಿ ಅಲೆಗಳ ರಭಸ ಹೆಚ್ಚಾಗುತ್ತೆ, ಅಪ್ಪ ಮಗಳಿಗೆ ಹೇಳುತ್ತಾನೆ "ಮಗು ಅಲೆಗಳ ರಭಸ ಹೆಚ್ಚಾಗ್ತಿದೆ ನನ್ನ ಕೈಯನ್ನು ಬಿಗಿಯಾಗಿ ಹಿಡಿದುಕೊ" . ಮಗು ಅಪ್ಪನ ಕೈ ಹಿಡಿಯದೆ "ಅಪ್ಪಾ ನೀನೇ ನನ್ನ ಕೈ ಹಿಡಿದುಕೊಳ್ಳಪ್ಪಾ" ಎಂದು ಮುಂದೆ ನಡೆಯುತ್ತದೆ. ಅಪ್ಪ ಕೇಳುತ್ತಾನೆ " ಮಗು ನನ್ನ ಕೈ ಹಿಡಿದು ಎಂದರೆ ನೀನು ನನ್ನನ್ನೇ ನಿನ್ನ ಕೈ ಹಿಡಿದುಕೊ ಅನ್ತೀಯಲ್ಲ?" . ಅದಕ್ಕೆ ಮಗು ಕೊಟ್ಟ ಉತ್ತರ "ಅಪ್ಪ ಅಲೆ ಬಂದಾಗ ನಾನು ನಿನ್ನ ಕೈ ಹಿಡಿದಿದ್ದರೆ ನನ್ನ ಕೈ ಕಳಚ ಬಹುದು, ಕಳಚಿ ಅಲೆಯಲ್...

ಹನಿಗವನಗಳು Short poems by Kumar B Bagival

  ಹನಿಗವನಗಳು ಮುಷ್ಕರ..                 ಮಾಡಯುತಿವೆ ದನಕರುಗಳು ಮುಷ್ಕರವನು ಇಂದು ಯಾಕೆಂದರೆ  ಅಷ್ಟೊಂದು ಮೇವ ತಿಂದ  ಲಾಲು ಹಾಲು ಕೊಡಲಿ ಎಂದು. ಚಂದ್ರಮುಖಿ… ಪ್ರಿಯೇ ನೀ ಚಂದ್ರಮುಖಿಯೇ ಸರಿ ಯಾಕೆಂದರೆ ಚಂದ್ರನಂತೆಯೇ ನಿನ್ನ ಮುಖದಲ್ಲಿಯೂ ಮೊಡವೆ ಕಲೆಗಳ ಭಾರೀ ಕಂದಕಗಳಿವೆ. ಕವಿತೆ.. ಕವಿತೆಯಲ್ಲ ನನದು  ಕವಿಭಾಷೆಯ ಮೂಲ ಕನಸನೆಲ್ಲ ಓದುವೆ  ಅದೇ ನನ್ನ ಕವಿತೆಯ ಬಲ. ರಚನೆ : ಕುಮಾರ್. ಬಿ.ಬಾಗೀವಾಳ್.

ಹನಿಗವನಗಳು.... Short poems By Kumar B Bagival

  ಹನಿಗವನಗಳು                 ತಡೆಯಲಾರೆ… ನಿಂತಲ್ಲಿ ನಿಲ್ಲದ ನಿನ್ನ  ನಿಂದಿಸಿ ನಿಲಿಸಲಾರೆ.. ನಿಂತ ನೀರಿನ ಮಡುವಿನ ಸೆಳೆತವನು ನಾ ಬಲ್ಲೆ.. ಎಂದೇ ನಿನ್ನನು ನಾ ತಡೆಯಲೊಲ್ಲೆ. ಫಲಿತಾಂಶ… ಹರಿದುಬಿಡು ತೋಚಿದ ದಿಕ್ಕಿಗೆ ಹರಿದ ಪರಿಣಾಮಗಳೆರಡೆ ಸೋಲುವೆ ನೀ ದೂರ ಸಾಗಿ ಹೀರಿಹೋಗುವೆ ಇಲ್ಲ ನೀ ಸೇರಿಹೋಗುವೆ ಕಡಲೊಡಲ. ರಚನೆ : ಕುಮಾರ್. ಬಿ.ಬಾಗೀವಾಳ್

ದಣಿವರಿಯದ ದೈವ.... Danivariyada Daiva...poem about Sri Shivakumara swamiji by Kuar B Bagival.

Image
  ದಣಿವರಿಯದ ದೈವ… ನಡೆದ ನಡಿಗೆಯೆಲ್ಲವು ನುಡಿದ ಪದಗಳಿಗರ್ಥವು ಮುಡಿದ ಸಂಕಲ್ಪವದು ದುಡಿವ ಕೈಗಳಿಗರ್ಥವು ನೀಡಿದ ದಾನವದು ಮಾಡಿದ ದಾಸೋಹದರ್ಥವು ನುಡಿದ ನುಡಿಗಳವು ವಿಶ್ವ ಬೆಳಗುವುದರ ಅರ್ಥವು. ಹಿಡಿದ  ಜೋಳಿಗೆಯೊಂದದು ನಿತ್ಯ ಅಕ್ಷಯವಾಗಿದೆ ಕಾಡಿದ ಹಸಿವ ನೀಗಿದ ತುತ್ತದು ಅಮೃತವೆ ತಾನಾಗಿದೆ ಬಿಡದ ಛಲವದು ಗುರಿಯ ಮುಟ್ಟಿದೆ ಎತ್ತಲೂ ತಾ ಅಲುಗದೆ ಮಿಡಿದ ಹೃದಯವದು ಬಿಡದೆ ಲೋಕವನೆ ತಾ ಸಲುಹಿದೆ. ನೆಲದ ಒಲವಿಗೆ ಬಲವ ತುಂಬಿದ ನಿತ್ಯ ಕಾಯಕ ಸೆಳೆತ ಮಕ್ಕಳ ಜ್ಞಾನ ದೀವಿಗೆ ಹೊತ್ತಿಸುವ ಪ್ರಕಾಶಕ ಮೊಳೆವ ನಾಳಿನ ಬೀಜಕೆ ನೀರನೆರೆಯುವ ಕಾಯಕ ಬಾಳ ದಾರಿಯುದ್ದಕೂ ನುಡಿನಡೆಯದೋ ದ್ಯೋತಕ ಬೆಳೆದವೆಷ್ಟೋ ಕುಡಿಗಳು ಫಸಲ ನೀಡಿವೆ ದೇಶಕೆ ಕಳೆದವೆಷ್ಟೋ ಕೊಳೆಗಳು ಶುಭವ ನುಡಿದ ವಾಕ್ಯಕೆ ನಾಳೆ ಸೂಚನೆ ದೀವಿಗೆ ಬೆಳಗುತಿಹುದು ಜಗದಗಲಕೆ ವೇಳೆಯ ಪರಿವೆಯಿಲ್ಲದ ಶ್ರಮವು ಜಗದ ಹಿತಕೆ. ರಚನೆ: ಕುಮಾರ್ ಬಿ ಬಾಗೀವಾಳ್

ತಡೆಯದಿರು ಮನುಜ ಕಡಲ...by / KUMAR B BAGIVAL

  ತಡೆಯದಿರು ಮನುಜ ಕಡಲ... ಮರಳಿ ಸರಿ ಹೋಗದು ಮನುಜ ಹದಗೆಟ್ಟಾ ಹಾಲು ಹುಳಿ ಬಂದ ಹಾಲು ಅದುವೆ ಬೇರೆಯವರ ಪಾಲು. ಹಳಿ ಬದಲಿಸಿದ ಬಂಡಿ ಮುಂದೆ ಹಿಡಿಯದು ಸಾಲು ಕಳಿಯಿತಂದು ಅದರಷ್ಟಕೆ ಬಿಡು ನೀ ಅದನು ಚಿಂತೆ ಬೇಡ. ಖುಷಿಗಾಗಿ ತಿರುಗೋದೊಮ್ಮೆ ತಿರುಗಿ ಬೀಳೋದು ಖಚಿತ ತಿರುಗುವಿಕೆಯಾ ತಡೆಯದಿದ್ದರೆ ನೀನು ಅದು ನಿನಗೇ ಉಚಿತ ಮರುಗಿ ಕೊರಗದಿರೋ ಮಂಕೆ ಅರಿತಿಲ್ಲಾ ನೀ ಜಗವ ಜಗವೆಲ್ಲಾ ಜಗಮಗ ಮಗನೇ ತಿಳಿ ಬೆಳಕ ಕಡೆಯ ಜಗವ. ತಡೆಯುಲಾದೀತೆ ಕಡಲ ರಕ್ಕಸದಲೆಯ ಕಡಲಲೇ ನೀನು ತರವಲ್ಲ ನಿನಗದು ನಿನ್ನ ಹಾದಿ ನಿನಗೆ ಸರಿದು ಬಿಡು ನೀನೆ ತಡೆಯಲಾದೀತೆ ಹರಿವ ನೀರ ಕೊಚ್ಚೆ ಸೇರದ ಹಾಗೆ  ಕೊರೆದು ಕೊಚ್ಚೆ ಸೇರುವೆನೆಂದರೆ ಸೇರಲಿಬಿಡು ಅದರ ಪಾಡಿಗೆ. ಹಣ್ಣು ಹಣ್ಣಾಗಿರುವಾಗಲಷ್ಟೇ ಅದು ನಿನ್ನ ಪಾಲು ಹಣ್ಣು ಕೊಳೆತು ನಾರಿ ಹೆಂಡವಾದರೆ ಅದು ಕುಡುಕರ ಪಾಲು. ಹುಣ್ಣು ಹೊಡೆದಮೇಲಿನ ಗಾಯದ ಗುರುತು ಶಾಶ್ವತ ಹುಣ್ಣು ಕೆರೆಯದಿದ್ದರೆ ವಾಸಿ ಮಾಸುವುದು ನಿಶ್ಚಿತ.

ಕವಿಶೈಲಕ್ಕೊಂದು ಪ್ರವಾಸ , A journey towards Kavishaila , A travel guide by Kumar B Bagival

Image
  ಕವಿಶೈಲಕ್ಕೊಂದು ಪ್ರವಾಸ ಯೋಜನೆ. ಕನ್ನಡ ನಾಡಲ್ಲಿ ಸುತ್ತಾಡಿದವನು ಹಲವು ದೇಶಗಳನ್ನು ಸುತ್ತಿದ್ದಕ್ಕೆ ಸಮ ಹಾಗಾಗೆಯೇ ಹೇಳೋದು… ಕರ್ನಾಟಕ " ಒಂದು ರಾಜ್ಯ, ಹಲವು ಪ್ರಪಂಚ " ಅನ್ನೋದು. ಸಮೃಧ್ದವಾದ ನಾಡು ಭೂಮಿಮೇಲೆ ಇದ್ದಿದ್ದೇ ಆದರೆ ಅದು ಕನ್ನಡ ನಾಡು ಮಾತ್ರ ಅನ್ನೋದು ಇಲ್ಲಿರುವವರು ಮಾತ್ರ ಹೇಳೋ ಮಾತಲ್ಲ ಪ್ರಪಂಚದ ಮೂಲೆ ಮೂಲೆಗಳಿಂದ ಬಂದು ಕನ್ನಡ ನೆಲದ ಮೇಲೆ ಸುತ್ತಾಡಿದ ಪ್ರತೀ ಪ್ರವಾಸಿಗನೂ ಹೇಳೋ ಮಾತು. ಅದರಲ್ಲೂ ಪಶ್ಚಿಮ ಘಟ್ಟದ ಮೇಲೊಂದು ಮೆಲು ಪ್ರವಾಸ ಕೈಗೊಳ್ಳದಿದ್ದರೆ ಅಲ್ಲಿನ ಪ್ರವಾಸ ತಾಣ, ಪ್ರಕೃತಿ ಸೊಬಗನ್ನ ಸವಿಯದಿದ್ದರೆ ಇಲ್ಲಿನ ಕಾವ್ಯ ,ಕವಿಯ ಬಗ್ಗೆ ಅವರ ಹಿಂದಿರುವ ನೈಸರ್ಗಿಕ ಸೊಬಗಿನ ಶಕ್ತಿಯನ್ನು ಅರಿಯಲು ಸಾದ್ಯವೇ ಇಲ್ಲ. ರಸ ಋಷಿಗಳ ತಾಣ ನಿಜವಾಗಿಯೂ ಸೆಳೆಯದಿರದು ಕಣ್ಮನ.    ಅಂದ ಹಾಗೆ  "ಪ್ರವಾಸಾನುಭವ" ದಲ್ಲಿ ನಿಮ್ಮನ್ನ ನೇರ ಕವಿಮನೆ ಕವಿಶೈಲಕ್ಕೆ ಕರೆದ್ಕೊಂಡು  ಹೋಗ್ತೀನಿ ಬನ್ನಿ… ಚಿತ್ರ: ಕವಿಮನೆ  ಕೃಪೆ: ಇಂಟರ್ನೆಟ್ ಕವಿಮನೆ ಇರೋದು ಕರ್ನಾಟಕದ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಸುಂದರ ವನಸಿರಿಯ ಮಧ್ಯೆ.  ಕರ್ನಾಟಕದ ಸಾಹಿತ್ಯ ಶ್ರೀಮಂತಗೊಳಿಸಿದ , ಕವಿ ಎಂದರೆ ತಟ್ ಅಂತ ನೆನಪಾಗೋದು ಒಬ್ಬರೇ ಅದು… ಹಾ… ಹೌದು ಕುವೆಂಪು… ಅರ್ಥಾತ್ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರ ಹುಟ್ಟೂರು ಕುಪ್ಪಳಿಯಲ್ಲಿ.     ಕವಿಶೈಲ  ಕರ್ನಾಟಕದ ಪ್ರವ...