Posts

ಮಂದಾಗ್ನಿ Mandagni a poem by Kumar B B Bagival

 ಮಂದಾಗ್ನಿ ನಿನ್ನೊಳಗಿನ ಮಂದಾಗ್ನಿಯೊಮ್ಮೆ ಉರಿಯಲಿ ಬಿಡು ಸೊನ್ನೆಯೊಳಧಿಕ ಮೌಲ್ಯವ ಕಾಣುವ ಹಾಗಿರಲಿ ಬಿಡು ಮುನ್ನಿನೊಳು ಸಾಲು ಕರೆವ ಹಸುಗಳ ಕೆಚ್ಛಲ ಹಾಲು ಹೆತ್ತು ತೈಲವಾಗುವ ಹಾಲು ಅಗ್ನಿವರ್ಧಕವಾಗೊ ಓಲು. ತೇಲುವ ಕರಿಮೋಡವೊಂದು ಬರಸಿಡಿಲ ಸಿಡಿಸಲಿ ಬಿಡು ಕಾಡುವ ಮನವೊಂದು ಬಾಡುವ ಮುನ್ನ ಮುನ್ನಲೆಗೆ ಬರಲಿ ಬಿಡು ಬಾಡುವ ಹೂವೊಂದು ಬಾಡುವ ಮುನ್ನ ಸುಗಂದವ ಸೂಸಲಿ ಬಿಡು ನೋಡುವ ನೋಟವದು ಮುಂದಿನ ದಾರಿಗೆ ರಹದಾರಿಯಾಗಲಿ ಬಿಡು. ಚಕ್ರದೊಳು ಗಾಳಿಯಾಗಲಿ ಬಿಡು ಸರಾಗ ಸಾಗಲು ಎದೆಯೊಳಗಿನ ಉಸಿರಾಗಲಿ ಬಿಡು ದೇಹ ಸಾಗಲು ಮೌನದೊಳಗಿನ ಮಾತಾಗಲಿ ಬಿಡು ಮನ ಮಾಗಲು ಬಂದಿಯಾಗಲಿ ಬಿಡು ಕೋಳವಿಲ್ಲದೆ ಮನಸ ಲೂಟಿಮಾಡಲು ರಚನೆ : ಕುಮಾರ್ ಬಿ ಬಾಗೀವಾಳ್.

School based MIS Used by different states

  Five school based MIS used by different states http://rajssa.nic.in/Home/Home.aspx http://emis.tnschools.gov.in/ https://hryedumis.gov.in/ http://epunjabschool.gov.in/ https://twsis.cgg.gov.in/ http://www.schooleducation.kar.nic.in/ About Karnataka state school based MIS . What is the URL of the MIS           http://www.schooleducation.kar.nic.in/    2.  Can it be accesed offline                      Partially    3 .  Who are the users like teachers/ students/ government officials etc? By all catagory     4.  What are the data collected?          Data about administration, children,teachers, programs,exam board           etc         5.   Wha...

ಅಂತಿಮವಾಗು… ಪರರ ಪರಪಂಚದಲಿ. Anthimavagu... a poem by Kumar B Bagival

  ಅಂತಿಮವಾಗು… ಪರರ ಪರಪಂಚದಲಿ. ನಾ ನಡೆದದ್ದೇ ಹಾದಿಯಾಗಬೇಕು  ನಾ ಕಂಡಿದ್ದೇ ನಿಜವಾಗಬೇಕು ನಾ ಕೊಂಡಿದ್ದೇ ವರವಾಗಬೇಕು ನಾ ನುಡಿದಿದ್ದೇ ಅಂತಿಮವಾಗಬೇಕು. ಎಂದಾದರೆ ಅದು ನೀನೊಬ್ಬನಿರುವ ಪರಪಂಚದಲ್ಲಿ ಮಾತ್ರ. ಬೆಳಕಾಗು ಹಾದಿಯಾಗಲು, ಕನ್ನಡಿಯಾಗು ನಿಜವಾಗಲು, ದೇವರಾಗು ವರವಾಗಲು, ಅಂತರಾತ್ಮವಾಗು ಅಂತಿಮವಾಗಲು. ಅಂದಾದರೆ ಮಾತ್ರ ನೀನಿರುವೆ ಪರರ ಪರಪಂಚದಲಿ. ರಚನೆ : ಕುಮಾರ್ ಬಿ ಬಾಗೀವಾಳ್

ಬರುವೆಯಾ ಗೆಳತಿ ಬದುಕ ಪಯಣದ ಜೊತೆ

  ಬರುವೆಯಾ ಗೆಳತಿ ಬದುಕ ಪಯಣದ ಜೊತೆ ಹೊ ರುವೆ ಪಲ್ಲಕಿಯ  ನಿನ್ನ ಸಹಿತ ನಿರಂತರ ಹಂಬಲದ ತುಮುಲ ಮನಸಿಗೊಂದಿಷ್ಟು ನೆಮ್ಮದಿಯ, ತುಂಬು ಪ್ರೀತಿಯ ತುಂಬಿ ಮೆರೆಸುವೆ ಬಿಗಿದಪ್ಪಿ ಬಿಮ್ಮನೆ. ಸರಿವ ಮೋಡಕೂ ಬಿಡುವಾಗಲೀ ಬಿಡು ಜೊತೆಗೆ ನಾನಿಲ್ಲವೆ ಸುರಿವ ಮಳೆಗಷ್ಟು ತೋಯ್ದುಬಿಡು ಹೊದುಪು ಕೊಡುವ ಬಯಕೆಯು ಬರಿಗಾಲಲೊಂದಷ್ಟು ದೂರ ನಡೆದುಬಿಡು ಹೆಜ್ಜೆಗೂ ತಳವಾಗುವೆ ಗುರಿಯೆ ನಾನಾಗಿದ್ದರೆ ನನ್ನನೊಮ್ಮೆ ಹಾಗೆ ಒಪ್ಪಿಬಿಡು. ಕಣ್ಣಳತೆಗೂ ಮಿಕ್ಕಿ ವಿಸ್ತಾರವಿದೆ ಬಾನ ಚಿತ್ತಾರ ಸಣ್ಣ ಕಣಕಣವೂ ನೆನಪಿಡುವ ಹಾಗೆ ಬದುಕು ಕಟ್ಟುವ ಸರಿ-ಬೆಸಗಳನ್ನೂ ಸರಿಯಾಗಿಯೇ ನೋಡುವೆನು ಬೆಟ್ಟದಷ್ಟಿದ್ದರೂ ಕಷ್ಟಗಳು ಇಷ್ಟಪಟ್ಟೇ ಮೆಟ್ಟಿನಿಲ್ಲುವ. ಮೊಗೆದಷ್ಟು ಮುಗಿಯದ ಸುಮಧುರ ಭಾವಗಳ ಅಲೆಗಳಲಿ ಈಜುತಾ ಸಾಗುವ ಬದುಕ ಕೊನೆವರೆಗೂ ನಾಳೆಗಳ ಪರಿವೆಯೇ ಬೇಡ ಸದ್ಯವಷ್ಟೇ ನಮದು ಸಾಧ್ಯತೆಗಳ ಗೊಡವೇ ಬೇಡ ಪರಿಪಕ್ವ ಬದುಕಿಗೆ‌. ರಚನೆ : ಕುಮಾರ್ ಬಿ ಬಾಗೀವಾಳ್.

ತಡೆಯದಿರು ಮನುಜ ಕಡಲ...

  ತಡೆಯದಿರು ಮನುಜ ಕಡಲ... ಮರಳಿ ಸರಿ ಹೋಗದು ಮನುಜ ಹದಗೆಟ್ಟಾ ಹಾಲು ಹುಳಿ ಬಂದ ಹಾಲು ಅದುವೆ ಬೇರೆಯವರ ಪಾಲು. ಹಳಿ ಬದಲಿಸಿದ ಬಂಡಿ ಮುಂದೆ ಹಿಡಿಯದು ಸಾಲು ಕಳಿಯಿತಂದು ಅದರಷ್ಟಕೆ ಬಿಡು ನೀ ಅದನು ಚಿಂತೆ ಬೇಡ. ಖುಷಿಗಾಗಿ ತಿರುಗೋದೊಮ್ಮೆ ತಿರುಗಿ ಬೀಳೋದು ಖಚಿತ ತಿರುಗುವಿಕೆಯಾ ತಡೆಯದಿದ್ದರೆ ನೀನು ಅದು ನಿನಗೇ ಉಚಿತ ಮರುಗಿ ಕೊರಗದಿರೋ ಮಂಕೆ ಅರಿತಿಲ್ಲಾ ನೀ ಜಗವ ಜಗವೆಲ್ಲಾ ಜಗಮಗ ಮಗನೇ ತಿಳಿ ಬೆಳಕ ಕಡೆಯ ಜಗವ. ತಡೆಯುಲಾದೀತೆ ಕಡಲ ರಕ್ಕಸದಲೆಯ ಕಡಲಲೇ ನೀನು ತರವಲ್ಲ ನಿನಗದು ನಿನ್ನ ಹಾದಿ ನಿನಗೆ ಸರಿದು ಬಿಡು ನೀನೆ ತಡೆಯಲಾದೀತೆ ಹರಿವ ನೀರ ಕೊಚ್ಚೆ ಸೇರದ ಹಾಗೆ  ಕೊರೆದು ಕೊಚ್ಚೆ ಸೇರುವೆನೆಂದರೆ ಸೇರಲಿಬಿಡು ಅದರ ಪಾಡಿಗೆ. ಹಣ್ಣು ಹಣ್ಣಾಗಿರುವಾಗಲಷ್ಟೇ ಅದು ನಿನ್ನ ಪಾಲು ಹಣ್ಣು ಕೊಳೆತು ನಾರಿ ಹೆಂಡವಾದರೆ ಅದು ಕುಡುಕರ ಪಾಲು. ಹುಣ್ಣು ಹೊಡೆದಮೇಲಿನ ಗಾಯದ ಗುರುತು ಶಾಶ್ವತ ಹುಣ್ಣು ಕೆರೆಯದಿದ್ದರೆ ವಾಸಿ ಮಾಸುವುದು ನಿಶ್ಚಿತ. ರಚನೆ : ಕುಮಾರ್ ಬಿ ಬಾಗೀವಾಳ್

ಶರಣಾಗುವೆ ಗುರುವೆ ಶಿರಬಾಗಿ.

  ಶರಣಾಗುವೆ ಗುರುವೆ ಶಿರಬಾಗಿ. ಬೆಳಕಾಗಲಿ ಗುರುವೆ ನಿನ್ನ ನೆನಹು ನಾ ನಡೆವ ಹಾದಿಯುದ್ದಕೂ ಜೊತೆಗೆ ಸಾಗಲಿ ಶರಣಾಗುವೆ ಶಿರಬಾಗಿ , ಮುನ್ನಡೆಸಿ ನನ್ನ. ಉಸಿರಾಗಲಿ ಗುರುವೆ ನಿನ್ನ ಕುರುಹು ಉಸಿರು ನಿಲ್ಲುವವರೆಗೂ ಒಂದೇ ಆಗಲಿ ಶರಣಾಗುವೆ ಶಿರಬಾಗಿ , ಮುನ್ನಡೆಸಿ ನನ್ನ. ಬೆಳಕಾಗಲಿ ಗುರುವೆ ನಿನ್ನ ನೆನಹು ನಾ ನಡೆವ ಹಾದಿಯುದ್ದಕೂ ಜೊತೆಗೆ ಸಾಗಲಿ ಶರಣಾಗುವೆ ಶಿರಬಾಗಿ, ಮುನ್ನಡೆಸಿ ನನ್ನ. ಶಿಲ್ಪವಾಗಲಿ ಗುರುವೆ ನೀ ಮಟ್ಟಿದಾ ಶಿಲೆಯು ಕಲ್ಪವಾಗಲಿ ಅಲ್ಪವ ಮೀರಲಿ ಮೇರೆ ಶರಣಾಗುವೆ ಶಿರಬಾಗಿ , ಮನ್ನಡೆಸಿ ನನ್ನ. ಬೆಳಕಾಗಲಿ ಗುರುವೆ ನಿನ್ನ ನೆನಹು ನಾ ನಡೆವ ಹಾದಿಯುದ್ದಕೂ ಜೊತೆಗೆ ಸಾಗಲಿ ಶರಣಾಗುವೆ ಶಿರಬಾಗಿ , ಮುನ್ನಡೆಸಿ ನನ್ನ. ನೆಲೆಯಾಗಲಿ ಗುರುವೆ ನೀ ನೀಡಿದ ಮಲೆಯು ಅಲೆದಾಡೋ ಮನವು ನೆಲೆಸಲಿ ವರುಷ ಶರಣಾಗುವೆ ಶಿರಬಾಗಿ , ಮುನ್ನಡೆಸಿ ನನ್ನ. ರಚನೆ : ಕುಮಾರ್ ಬಿ ಬಾಗೀವಾಳ್.

ಕಣ್ಣ ಹನಿ ಬರೆದಿದೆ ಕವನ. Kanna hani baredide kavana.... a poem by Kumar B Bagival

  ಕಣ್ಣ ಹನಿಯೊಂದು ಕವನ ಬ ರೆದಂತಿದೆ ಕೆನ್ನೆಯ ಮೇಲೆ. ಹರಿದಿದೆ ಗಲ್ಲದುದ್ದಕೂ ವಾಚಿಸಿ. ಬಣ್ಣ ಮಾಸುತಿದೆ ಹನಿಗೆ ಕಾಣದ ಹೊದುಪಿನೊಳಗಿನ ತೊಗಲು ಕಾಣುತಿದೆ ನೆಮ್ಮದಿಯನು ಯಾಚಿಸಿ. ಮುಚ್ಚಿಟ್ಟ ಸತ್ಯದ ಹರಿವು ಬಚ್ಚಿಡಲಾಗದ ಹೊರಹರಿವು ಕೊಚ್ಚಿಹೋದಂತಿದೆ ಪದರ ಕಿಚ್ಚಾಯಿಸಿ. ರೆಪ್ಪೆಯ ಮಧ್ಯದಲೆಷ್ಟೋ ಕಪ್ಪೆ ಚಿಪ್ಪೊಳಗಿದ್ದ ಮುತ್ತುಗಳು ಹರಡಿ ನಿಂತಿವೆ ತಡೆದು ಒಡೆಯದೆ ವಿವೇಚಿಸಿ. ಮಂಜಾಗಿಸಿದ ಮುತ್ತುಗಳ ರಾಶಿಯ ಮೇಲೆ ಕವನದ ಸಾಲುಗಳೇ ಸಾಲಾಗಿ ಸಾರುತಿವೆ ಸರಧಿಗಾಗಿ ಯೋಚಿಸಿ. ಜಾರಿದ ಕಂಬನಿ ಸೇರಿದೆ ಮರಳೊಳಗೆ                                      ಸುರಿದ ಹನಿಯದು ಬೆರೆತಿದೆ ಮಳೆಯೊಳಗೆ ಕುರುಹು ಇಲ್ಲದ ಹಾಗಾಗಿದೆ ಸಮಯದ ಹಂಗನು ಯಾಚಿಸಿ. ರಚನೆ : ಕುಮಾರ್ ಬಿ ಬಾಗೀವಾಳ್.