Posts

Showing posts from October, 2020

ವಚನಾನುಕರಣೆ vachananukarane By: Kumar B Bagival

  ಅನುಕರಣೆ ೩: ದಿನಾಂಕ ೨೨/೧೦/೨೦೨೦ ಶಿವಶರಣ ಅಂಬಿಗರ ಚೌಡಯ್ಯ ರಚಿತ ಅರಿಯದ ಗುರು ಅರಿಯದ ಶಿಷ್ಯಂಗೆ  ಅಂಧಕನ ಕೈಯನಂಧಕ ಹಿಡಿದಡೆ ಮುಂದನಾರು ಕಾಬರು ಹೇಳಲೆ ಮರುಳೆ.  ತೊರೆಯಲದ್ದವನನೀಸಲರಿಯದವ  ತೆಗೆವ ತೆರನಂತೆಂದನಂಬಿಗ ಚೌಡಯ್ಯ. ವಿವರ: ಹನ್ನೆರಡನೆಯ ಶತಮಾನ ಭರತಖಂಡ ಕಂಡ ಅದ್ಭುತ ಸಾಮಾಜಿಕ ಬದಲಾಾವಣೆಗಳನ್ನು ಕಂಡ ಕಾಲ. ಅಣ್ಣ ಬಸವಣ್ಣನವರ ಮಾರ್್ಗ್ಗದರ್ಶನ ದೊರೆತ ಸಂದರ್ಭದಲ್ಲಿ , ಪ್ರತೀ ವಚನಕಾರರು ಸಮಾಜ ತಿದ್ದುವ ಕೆಲಸ ಮಾಡಿದರು. ಅವರು ನಡೆದಂತೆ ನುಡಿದವರು. ಅದರಲ್ಲೂ ಅಂಬಿಗರ ಚೌಡಯ್ಯ ನವರು ಇದ್ದದ್ದನ್ನು ಇದ್ದಹಾಗೆ ನುಡಿದವರು. ಈ ವಚನದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರು ಹೇಗಿರಬೇಕು ಎಂಬುದನ್ನು ನಿದರ್ಶನ ಸಹಿತ ಹೇಳಿದ್ದಾರೆ. ಶಿಕ್ಷಣ ನಿಂತ ನೀರಲ್ಲ ಸದಾ ಹರಿಯುತ್ತಿರುವುದು ಅದರ ಲಕ್ಷಣ. ಶಿಕ್ಷಣವೆಂಬ ಜ್ಯೋತಿ ಸಂಜೀವಿನಿ ಸದಾ ದೀಪದಿಂದ ದೀಪವ ಹಚ್ಚುವ, ಹೆಚ್ಚುವ ನಂದದ ದೀಪ. ಗುರು ನಿರಂತರ ಅಭ್ಯಾಸ ಮಾಡುತ್ತಿರಬೇಕು, ಅಭ್ಯಾಸ ಮಾಡುತ್ತಾ ನಿರಂತರ ಅರಿವನ್ನು ಪಡೆಯುತ್ತಿರಬೇಕು.ಸದಾ ಜ್ಞಾನವನ್ನು ಪಡೆಯುವ ಪ್ರನಯತ್ನದಲ್ಲಿ ನಿರತನಾಗಿರಬೇಕು. ಪಡೆದ ಜ್ಞಾನದ ಸದ್ಬಳಕೆಯಾಗಬೇಕು. ತಾನು ತನ್ನ ಶಿಷ್ಯರಿಗೆ ಮಾದರಿಯಾಗಿ ಇರಬೇಕು. ತಾನು ಉತ್ತಮನಾಗಿದ್ದರೆ ಮಾತ್ರ ತನ್ನ ಶಿಷ್ಯರಿಗೆ ಉತ್ತಮವಾದದನ್ನು ಕೊಡಲು ಸಾದ್ಯ ಎಂಬುದರ ಅರಿವು ಗುರುವಿಗೆ ಸದಾ ಜಾಗೃತವಾಗಿರಬೇಕು. ಸಮಾಜದ ಪ್ರತೀ ಕ್ಷೇತ್ರದ ಉತ್ತಮತೆ ಗುರುವಿ...

ವಚನಾನುಕರಣೆ. Vachananukarane, By Kumar b bagival

  ವಚನಾನುಕರಣೆ. ಅನುಕರಣೆ ೨ . ದಿನಾಂಕ: ೨೧/೧೦/೨೦೨೦ ಶಿವ ಶರಣೆ ಅಕ್ಕ ಮಹಾದೇವಿ ರಚಿತ   ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ ನಮೋ.  ಭವಬಂಧನವ ಬಿಡಿಸಿ ಪರಮಸುಖವ ತೋರಿದ ಗುರುವೆ ನಮೋ.  ಭವಿಯೆಂಬುದ ತೊಡೆದು ಭಕ್ತೆ ಎಂದೆನಿಸಿದ ಗುರುವೆ ನಮೋ.  ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕ್ಕೆ ಕೊಟ್ಟ ಗುರುವೆ, ನಮೋ ನಮೋ. ವಿವರ: ಈ ವಚನ ನಮಗೆ ಗುರುವಿನ ಮಹತ್ಕಾರ್ಯವನ್ನು ತಿಳಿಸುತ್ತದೆ ಹಾಗು ಗುರುವಿಗೆ ವಿನಮ್ರ ಧನ್ಯನಾಗಿರಬೇಕಾಗಿ ತಿಳಿಸುತ್ತದೆ. ಮನುಷ್ಯ ಜನ್ಮ ಪಡೆದ ನಂತರ ಗುರುವಿನ ಕೃಪೆ ಇರದಿದ್ದರೆ ನರನಾಗಿಯೇ ಉಳಿಯುತ್ತಿದ್ದ. ನರನಲ್ಲಿನ ಗುಣಾವಗುಣಗಳನ್ನು ಗುರ್ತಿಸಿ ಶಿಕ್ಷಣವನಿತ್ತು ನರನನ್ನ ಹರನಾಗಿಸುವುದು ಗುರು. ಹರನಾದ ಬಳಿಕ ಗುರುವನ್ನು ಮರೆಯದೇ ನಮಿಸುವುದು. ಪ್ರತೀ ಯಶಸ್ವಿ ನಡಿಗೆಯಲ್ಲೂ ಗುರುಸ್ಮರಣೆ ಮಾಡುವುದು ನರನ ಕರ್ತವ್ಯ. ಜೀವನದ ಭವಬಂಧನವ ಬಿಡಿಸಿ ಮುಕ್ತಗೊಳಿಸಿ ಸುಖದ ಜೀವನದೆಡೆಗಿನ ದಾರಿ ತೋರುವುದು ಗುರುವೊಬ್ಬರೆ. ಭವಿಯನೊರತು ಭಕ್ತನಾಗಿಸುವುದೂ ಗುರುವೆ. ಅಷ್ಟೇ ಅಲ್ಲ ಜೀವನದ ಅಂತಿಮ ಗುರಿ ತಲುಪಿಸುವುದೂ ಗುರುವಿನಿಂದ ಕಲಿತ ಶಿಕ್ಷಣವೇ. ಇಲ್ಲಿ ಚನ್ನಮಲ್ಲಿಕಾರ್ಜುನ ಅಕ್ಕನವರ ಗುರಿ ,ಅಕ್ಕನವರ ಬದುಕಿನುದ್ದಕ್ಕೂ ,ಅಣ್ಣ ಬಸವಣ್ಣ, ಅಲ್ಲಮಪ್ರಭು, ಚೆನ್ನಬಸವಣ್ಣ ನವರಂತಹವರಿಂದ ಪಡೆದ ಸಲಹೆ ಅರಿವು ಸದ್ಗತಿಯ ಕಡೆಗೆ ಅಕ್ಕನವರನ್ನು ಕೊಂಡೊಯ್ಯಲು ಅನುವಾಗುವಂತೆ ಮಾಡುತ್ತವೆ. ಹಾಗಾಗಿ ಅಕ್ಕ...

ವಚನಾನುಕರಣೆ Vachana Anukarane

Image
  ವಚನಾನುಕರಣೆ. ಅನುಕರಣೆ ೧. ದಿನಾಂಕ: ೨೦/೧೦/೨೦೨೦ ಶಿವ ಶರಣೆ ಅಕ್ಕ ಮಹಾದೇವಿ ರಚಿತ ಕೃಪೆ: ಇಂಟರ್ನೆಟ್ ಗುರು ತನ್ನ ವಿನೋದಕ್ಕೆ ಗುರುವಾದ  ಗುರು ತನ್ನ ವಿನೋದಕ್ಕೆ ಲಿಂಗವಾದ  ಗುರು ತನ್ನ ವಿನೋದಕ್ಕೆ ಜಂಗಮವಾದ  ಗುರು ತನ್ನ ವಿನೋದಕ್ಕೆ ಪಾದೋದಕವಾದ  ಗುರು ತನ್ನ ವಿನೋದಕ್ಕೆ ಪ್ರಸಾದವಾದ  ಗುರು ತನ್ನ ವಿನೋದಕ್ಕೆ ವಿಭೂತಿಯಾದ  ಗುರು ತನ್ನ ವಿನೋದಕ್ಕೆ ರುದ್ರಾಕ್ಷಿಯಾದ  ಗುರು ತನ್ನ ವಿನೋದಕ್ಕೆ ಮಹಾಮಂತ್ರವಾದ.  ಇಂತೀ ಭೇದವನರಿಯದೆ,  ಗುರು ಲಿಂಗ ಜಂಗಮ ಪಾದತೀರ್ಥ ಪ್ರಸಾದ ವಿಭೂತಿ ರುದ್ರಾಕ್ಷಿ  ಓಂ ನಮಃ ಶಿವಾಯಯೆಂಬ ಮಂತ್ರವ ಬೇರಿಟ್ಟು ಅರಿಯಬಾರದು.  ಅದಲ್ಲದೆ ಒಂದರಲ್ಲಿಯೂ ವಿಶ್ವಾಸ ಬೇರಾದಡೆ  ಅಂಗೈಯಲ್ಲಿರ್ದ ಲಿಂಗವು ಜಾರಿತ್ತು.  ಮಾಡಿದ ಪೂಜೆಗೆ ಕಿಂಚಿತ್ತು ಫಲಪದವಿಯ ಕೊಟ್ಟು  ಭವಹೇತುಗಳ ಮಾಡುವನಯ್ಯಾ.  ಇಷ್ಟಲಿಂಗದಲ್ಲಿ ನೈಷ್ಠೆ ನಟ್ಟು ಬಿಟ್ಟು ತ್ರಿವಿಧವ ಮರಳಿ ಹಿಡಿಯದೆ ವಿರಕ್ತನಾದನಯ್ಯಾ ಗುರು  ಚೆನ್ನಮಲ್ಲಿಕಾರ್ಜುನಾ ವಿವರ: ಈ ವಚನದಲ್ಲಿ ಅಕ್ಕಮಹಾದೇವಿಯವರು ಗುರುವಿನ ಮಹತ್ತರವಾದ ಸ್ಥಾನವನ್ನು ನೆನಪಿಸುತ್ತಾ ಅನುಸರಿಸಬೇಕಾದದ್ದರ ಕುರಿತು ನುಡಿಯುತ್ತಾರೆ. ತನ್ನ ಅರಿವಿಗೆ ಗುರು, ಗುರು,ಲಿಂಗ, ಜಂಗಮ,ಪಾದೋದಕ,ಪ್ರಸಾದ,ವಿಭೂತಿ,ರುದ್ರಾಕ್ಷಿ, ಹಾಗೂ ಓಂ ನಮಃ ಶಿವಾಯವೆಂಬ ಮಹಾಮಂತ್ರಗಳ ಮಹತ್ವದ ಅವಶ್ಯಕತೆ ಬಗೆಗೆ ನುಡಿದಿದ...

ಬರೆದ ಸಾಲುಗಳು.... The lines I write

  ಬರೆದ ಸಾಲುಗಳು ಬರೆಯಲೊರಟಾಗ ಬದುಕ ದಾರಿಗಳೇ , ಬೆರಳಿಡಿದು ಸಾಗಿದವು ತಲುಪಿಸಲು ಗುರಿಯ ಕಣ ಕಣವೂ ಚಡಪಡಿಸಿದವು ಸಲಹೆ ಕೊಡಲು ಕಣ್ಣೆದುರಿಗೆ ನಿಂದವು ಮುಂದೆ ಬಂದು ಕೈಮರವಾಗಿ. ದಾರಿಯುದ್ದಕೂ ತಂಪೆರೆದ ಮರಗಳೆಷ್ಟೋ, ದಾಹ ತೀರಿಸಲು ಜೊತೆಗರಿದ ಹೊಳೆಗಳೆಷ್ಟೋ, ಹಿತಕಾಗಿ ಹರಸಿ ಮೇಳೈಸಿದ ಹಸಿರ್ಸಾಲುಗಳೆಷ್ಟೋ, ಅಮಿತವಾಗಿ ಕೂಗಿ ಕರೆದ ಬೆಟ್ಟಗುಡ್ಡಗಳ ಧ್ವನಿಗಳೆಷ್ಟೋ. ಬರೆದ ಸಾಲುಗಳೊಳಗೆ ಸತ್ವವನೊಂದಿಷ್ಟು ಇಟ್ಟು ಕಟ್ಟಕಡೆಯ ಸಾಲನೊಮ್ಮೆ ಮರುಮೌಲ್ಯಿಸಿದವು ಕವಲದಾರಿಗಳ ಪ್ರಶ್ನೆಗಳು, ಸರಿದಾರಿಯ ಆಧರಿಸಿ ಹೊರಟ ಸಾಲುಗಳಿಗಿಲ್ಲಿ ಪೂರ್ಣ ಅಂಕಗಳು. ಮೌನಿಸಿ, ದಿಟ್ಟಿಸಿ, ಗಟ್ಟಿಸಿಕೊಂಡ ಬೆಟ್ಟುಗಳಿವು ಬರೆಯಲೊರಟ ಮನಕೆ ಮಾದರಿಯಾದವು ಬದುಕ ಬರಹವನೆ ಬದಲಿಸಲು ದಾರಿಯಾದವು ಸಾಧನೆಯ ಶಿಖರದ ಮೇಲಿನ ಶಿರವಾದವು. ರಚನೆ: ಕುಮಾರ್ ಬಿ ಬಾಗೀವಾಳ್

ಮರಳು .... ರಚನೆ: ಕುಮಾರ್ ಬಿ ಬಾಗೀವಾಳ್ please come back...

  ಮರಳು... ಉಸಿರಲೆ ಕಸಿವಿಸಿ ಕಾಣುತಿದೆ  ತುಸು ಸುಧಾರಿಸು ಕಾಯುವೆ ಮರು ಮಾತಿಗೆ ತರುವಿನ ಹಾಗೆ ಬಿಗಿದಪ್ಪಿ ಹುಸಿಯದ ಪ್ರೀತಿಯ ಕದ ತೆರೆವೆ ಜೀವನದುದ್ದಕು. ಕನಸಲೆ ಹೊಂಬಿಸಿಲಿಗೆ ತೆರೆದಿಟ್ಟ ಪುಷ್ಪಗಳ ಅರಳುವಿಕೆಗಾಗಿ ಕಾಯುವೆ ಬರದಿಟ್ಟು ಹೆಸರ  ಗಳಿಗೆಗೊಮ್ಮೆ ನನ್ನದೇ ಕೃತಿಸಂಪುಟದಲಿ ಚಂದದೊಂದು ಹೆಸರಿಟ್ಟು ಜೋಪಾನದಿ ಬಚ್ಚಿಟ್ಟು. ಸಾಗರದ  ತಟದಲ್ಲಿ ಸಾವಿರ ಅಲೆಗಳ                                      ಮರು ಬರುವಿಕೆಗಾಗಿ ಕಾಯುವೆ ಮರಳಲಿ  ಮರೆಯ ಬೇಕಾದದ್ದನ ಬರೆದು ಮೆರೆದಳಿಸಿ,  ‌ನೆರೆದುಳಿಯಲಿ ಸವಿನೆನಪುಗಳು ಅಂಗಳದಿ ಎಂದು    ಮುಗಿಲ ಮೇಲೆಲ್ಲೋ ಮೋಡದ ದುಗುಡ ಮಳೆಹನಿಯ ಹೆರುವಿಕೆಗೆ ಕಾಯುವೆ ಹೆತ್ತರಷ್ಟು ಭಾರ ಕರಗುವ ಹಾಗೆ ಅತ್ತುಬಿಡುವೆ ಮಳೆಗೆ ಇಳೆ ತುಂಬಿ ನಗುವ ಹಾಗೆ ಸುಮ್ಮನೆ. ರಚನೆ : ಕುಮಾರ್ ಬಿ ಬಾಗೀವಾಳ್      

ಗುರು ಮತ್ತು ವಚನಗಳು Teacher and vachanagalu

  ಗುರು ಮತ್ತು ವಚನಗಳು "ಗು ರುವಿನ ಗುಲಾಮನಾಗದ ಹೊರತು ಮಕ್ತಿ ದೊರೆಯದು "... ಜಗತ್ತಿನಲ್ಲಿ ಮತ,ಭಾಷೆ,ಕುಲ,ಸ್ಥರ,ಹೀಗೆ ಎಲ್ಲವೂ ಬೇರೆ ಬೇರೆ ಆದರೆ ಜಗತ್ತಿನಾದ್ಯಂತ ಒಂದೇ ಎಂಬುದೊಂದು ಇದ್ದರೆ ಅದು ಗುರುವಿನ ಸ್ಥಾನ ಮಾತ್ರ.  ವಚನಕಾರರು ಅರಿವಿನ ಮಾರಿತಂದೆ ಎನಗೆ ಗುರುವಾಗಬೇಡ ಹೆಣ್ಣು ಹೊನ್ನು ಮಣ್ಣಿನ ಆಸೆ ಉಳ್ಳನ್ನಕ್ಕ, ಎನಗೆ ಲಿಂಗವಾಗಬೇಡ ಶಕ್ತಿಸಂಪರ್ಕವುಳ್ಳನ್ನಕ್ಕ, ಎನಗೆ ಜಂಗಮವಾಗಬೇಡ ಕಂಡಕಂಡವರ ಮಂದಿರದಲ್ಲಿ ಹೊಕ್ಕು ಅಶನ ವಿಷಯಕ್ಕಾಗಿ ಹುಸಿವೇಷವ ತೊಟ್ಟು ಗಸಣಿಗೊಳಬೇಡ, ಎಂದು ಹೇಳಿದ ಮಾತಿಗೆ ನೊಂದ ನೋವು, ನಿಮ್ಮ ದೇವತ್ವದ ಹಾನಿ ಎನ್ನ ಸಜ್ಜನದ ಕೇಡು. ಎನ್ನ ಹೊದ್ದಡೆ ಮಾಣೆ, ಇದ್ದುದ ಹೇಳಿದೆ, ನೊಂದಡೆ ನೋಯೆ,ಸದಾಶಿವಮೂರ್ತಿಲಿಂಗವೆ ನಿನ್ನ ನಾ ಹಿಂಗದ ತೊಡಕು. ಗುರುಚರದಲ್ಲಿ ಸೇವೆಯ ಮಾಡುವನ್ನಕ್ಕ ಮೂರಕ್ಕೆ ಹೊರಗಾಗಿರಬೇಕು, ಮೂರಕ್ಕೆ ಒಳಗಾಗಿರಬೇಕು. ಮೂರರ ಒಳಗೆ ಕಂಡು ಮೂರರ ಹೊರಗನರಿತು,ನೆರೆ ನೀರನಾಗಿರಬೇಕು, ಸದಾಶಿವಮೂರ್ತಿಲಿಂಗವ ಮೀರಬೇಕು. ವಚನಕಾರರು ಅಕ್ಕಮ್ಮ ಗುರುವಾದಡೂ ಆಚಾರಭ್ರಷ್ಟನಾದಡೆ ಅನುಸರಿಸಲಾಗದು.  ಲಿಂಗವಾದಡೂ ಆಚಾರದೋಹಳವಾದಲ್ಲಿ ಪೂಜಿಸಲಾಗದು.  ಜಂಗಮವಾದಡೂ ಆಚಾರ ಅನುಸರಣೆಯಾದಲ್ಲಿ ಕೂಡಲಾಗದು.  ಆಚಾರವೆ ವಸ್ತು, ವ್ರತವೆ ಪ್ರಾಣ, ಕ್ರಿಯೆಯೆ ಆಚಾರ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ. ವಚನಕಾರರು ಅಪ್ಪಿ ದೇವಯ್ಯ ಹೊನ್ನು ಹೆಣ್ಣು ಮಣ್ಣು ಬಿಡಿಸದ ಗುರುವಿನ ಉಪದೇಶವನೊಲ್ಲೆ...