Posts

Showing posts from 2022

ವಿಶ್ವಗುರು ಬಸವಣ್ಣ. VISHWAGURU BASAVANNA. An article by Kumar B Bagival.

  ವಿಶ್ವಗುರು ಬಸವಣ್ಣ.                           --ಕುಮಾರ್ ಬಿ ಬಾಗೀವಾಳ್ ಜಗತ್ತಿನ ಬಹುತೇಕ ರಾಷ್ಟ್ರಗಳು ಸಂಸತ್ ರಚಿಸಿದ್ದವೋ ಇಲ್ಲವೋ , ಸಂವಿಧಾನದ ಅರಿವು ಇತ್ತೋ ಇಲ್ಲವೋ, ಪ್ರಜಾಪ್ರಭುತ್ವದ ಅರಿವು ಇದ್ದಿತೋ ಇಲ್ವೋ, ಅದಾಗಲೇ ಕರ್ನಾಟಕದ ಕಲ್ಯಾಣದಲ್ಲಿ ಅದರ ಚಿಗುರು ಬಿಟ್ಟಿದ್ದಂತು ಸತ್ಯ, ಬೀಜ ಬಿತ್ತಿ , ನೀರೆರೆದು, ಪೋಷಿಸುವ ಮೂಲಕ ಕ್ರಾಂತಿಯನ್ನೇ ಹುಟ್ಟು ಹಾಕಿದ್ದು ಶರಣರು. ಒಂದು ಹಂತಕ್ಕೆ ರಾಜರ ಒಳ್ಳೆ ಆಳ್ವಿಕೆ ಇದ್ದಾಗ್ಯೂ ಕೆಲವರ ಕುತಂತ್ರಗಳಿಂದಾಗಿ ಒಳ್ಳೆಯ ಬೆಳವಣಿಗೆಗಳು ಸಮಾಜದಲ್ಲಿ ಚಿಗುರುವ ಮೊದಲೇ ಚಿವುಟಿ ಹಾಕುವ ಬಹಳಷ್ಟು ಮಂದಿ ಇತಿಹಾಸದಲ್ಲಿ ಅಪಾರ. ಯಾವುದೇ ಸಂಪರ್ಕ ಸಾಧನಗಳು ಇಲ್ಲದ ಅಂದಿನ ದಿನಗಳಲ್ಲಿ , ಈಗಿನ ಹಾಗೆ ಬೆಳಗಾಗುವಷ್ಟರಲ್ಲಿ ಎಲ್ಲರನ್ನೂ ತಲುಪುವುದಕ್ಕಾಗಲಿ ಪ್ತತಿಕ್ರಿಯೆ ನೀಡುವುದಕ್ಕಾಗಲಿ ಸಾಧ್ಯ ಇಲ್ಲವೇ ಇರಲಿಲ್ಲ. ತಮ್ಮ ಕಾರ್ಯಸಾಧನೆಯಿಂದ ಮಾತ್ರ ಸಾಧ್ಯವಾಗುವುದಿತ್ತು. ಅಂತಹಾ ದಿನಮಾನಗಳಲ್ಲಿ ಅದೆಂತಹಾ ಶಕ್ತಿ ಇರಬೇಕು ಆ ಕ್ರಾಂತಿಕಾರಿಗೆ? ಚಿಕ್ಕದರಿಂದಲೇ ಸೌಮ್ಯವಾಗಿ ಪ್ರಶ್ನಿಸುವ ಗುಣವುಳ್ಳವರಾಗಿ, ಮೇಲು ಕೀಳುಗಳಿಲ್ಲ ಎಲ್ಲವೂ ಮೇಲೇ, ಜಾತಿ ಜಂಜಡಗಳಿಲ್ಲ ಎಲ್ಲವೂ ಒಂದೇ, ಪುರುಷ ಸ್ತ್ರೀ ಗೆ ಬೇಧವಿಲ್ಲ ಇಬ್ಬರೂ ಸಮಾನರು, ಎಲ್ಲರಿಗೂ ಸಮಾನ ಅವಕಾಶಗಳಿವೆ ಎಂದು ಕಟ್ಟುಪಾಡುಗಳನ್ನು ದಿಕ್ಕರಿಸಿದ , ಸಮಾಜಕ್ಕೆ ವ...

ಮತ್ತೆ ಸಂಭ್ರಮ.... Matthe sambhrama a poem

  ಮತ್ತೆ ಸಂಭ್ರಮ.... ಒಮ್ಮೆಲೇ ಬೆಳಕು ಹರಿದಂತ ಅನುಭವ ಸಾಲು ಸೋಲುಗಳ ಕಂಡವಗೆ ಒಮ್ಮೆ ಗೆಲುವಿನಾ ಸಂಭ್ರಮಾ, ಕರಿಮುಗಿಲ ಒಳಗಿಂದ ಕೋಲ್ಮಿಂಚು ಚಲಿಸಿದಾ ಎಚ್ಚರಾ ಇಂದು ಕಂಡಿದೇ ಒಮ್ಮೆಲೇ, ನಿನ್ನಿಂದಲೇ. ಕಡಲೊಳಗೆ ಅಲೆಗಳಾ ಸಡಗರ ಮುಡಿಲೊಳಗೆ ಹೂಗಳಾ ಪರಿಮಳ ತುಡಿತದಲಿ ಕೊಂಚ ಇಂದು ನಿರಾಳ ಇಂದು ಕಂಡಿದೇ ಒಮ್ಮೆಲೇ, ನಿನ್ನಿಂದಲೇ. ಹಿಂಡು ಹಿಂಡಾಗಿ ಕಂಡ ಕನಸೆಲ್ಲಾ ಕಣ್ಣೆದುರು ಹೊರಟಿದೇ ಸಾಲಾಗಿ ಮಣ್ಣ ಎದೆಗೆ ಮೊದಲಾ ಮಳೆ ಚುಂಬಿಸಿದ ಅನುಭವ ಇಂದು ಆಗಿದೇ ಒಮ್ಮೆಲೇ , ನಿನ್ನಿಂದಲೇ. ಬರಿಗಾಲಲೊಮ್ಮೆ ನಡೆಯಲೇ ತುಸುದೂರ ಸುರಿದ ಹಾಗೆ ಮಳೆಯ ಹೂ ಪದರ ಸವಿನುಡಿಯು ಗುನುಗುತಿದೆ ಎದೆಯೊಳಗೆ ಇಂದು ಕಂಡಿವೇ ಒಮ್ಮೆಲೇ , ನಿನ್ನಿಂದಲೇ. - ಕುಮಾರ್ ಬಿ ಬಾಗೀವಾಳ್.

GPT TEACHERS CET SUGGESTED REFERENCE BOOKS

 SUGGESTED REFERENCE BOOKS SUBJECT: CHILD DEVELOPMENT & PSYCHOLOGY 1. Child Development - Laura.E.Berk - Phi Learning Pvt Ltd (New Delhi) 2. Adolescence - John.W.Santrock - Tata Macraw Hill Edition 3. Child Growth & Development - Hurlock.E.B (2003)- Tata Macraw Hill Edition 4. Understanding Adolescence -Sharma.N (2011) - NBT - New Delhi 5. Human Development - Asha Singh (Ed)2015 - Orient Black Swan 6. Essentials Of Educational Psychology - S.K.Mangal - Phi Publications 7. Psychological Foundations Of Education - W.N.Dandekar 8. Advanced Educational Psychology - S.Dandapani 9 Advanced Educational Psychology - K.P.Pandey 10. Educational Psychology C.L.Kundu - D.N.Tutoo 11. Psychology Of Child Development - S. Bhattacharya 12.Advanced Educational Psychology - S.Dandapani 13. Advanced Educational Psychology - S.K.Mangal 14. A Text Book Of Educational Psychology - Bhatia & Bhatia 15. Advanced Educational Psychology - Seema Sharma 16. Psychological Foundations Of Education - ...

ಸರ್ಕಾರಿ ಶಾಲಾ ಜಿ ಪಿ ಟಿ ಶಿಕ್ಷಕರ ನೇಮಕಾತಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷಾ ಸಿಲಬಸ್

 ಸರ್ಕಾರಿ ಶಾಲಾ ಜಿ ಪಿ ಟಿ ಶಿಕ್ಷಕರ ನೇಮಕಾತಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷಾ ಸಿಲಬಸ್ ಗಣಿತ ಹಾಗೂ ಜೀವ ವಿಜ್ಞಾನ ಸಿಲಬಸ್ ಗಾಗಿ ಈ ಕೆಳಗಿನ ಲಿಂಕ್ ಅನ್ನು ಒತ್ತಿ https://in.docworkspace.com/d/sIJuKjL9Z-bDakgY

ಮುರಿಯಬಾರದೇಕೆ ಮೌನ.... ನನ್ನೊಲವೇ.

  ಮುರಿಯಬಾರದೇಕೆ ಮೌನ.... ನನ್ನೊಲವೇ. ಪದಗಳೊಳಡಗಿದ ಮನವೆ ಮಾತಾಗಬಾರದೇಕೆ ನೀನು. ಮರುಕಳಿಸಿವೆ ಕಳೆದ ನೆನಪುಗಳು  ನೋಟವಾಗಬಾರದೇಕೆ ನೀನು. ಪ್ರತಿ ಹೆಜ್ಜೆಯ  ನಿರೀಕ್ಷೆಯ ಮನವೇ ದ್ವನಿಯಾಗಬಾರದೇಕೆ ನೀನು. ಉಸಿರಿನ ಪ್ರತಿ ಕಣವೂ ನಿನ್ನೆಸರಿನ ಪ್ರತಿಫಲವೇ ಸಂಭ್ರಮಿಸಬಾರದೇಕೆ ನನ್ನೊಲವೇ. ಕ್ಷಣ ಕ್ಷಣಗಳು ಕೂಡ ಮಣರಾಶಿಯ ಬರಿ ನೆನಪೇ ಮುರಿಯಬಾರದೇಕೆ ಮೌನ ನೀನು. 👉ಕುಮಾರ್ ಬಿ ಬಾಗೀವಾಳ್

ಜಂಗಮನ ಪರದೆಯ ಮೇಲೆ... Jangamna paradeya mele a poem by KUMAR B BAGIVAL

  ಜಂಗಮನ ಪರದೆಯ ಮೇಲೆ... ಬರೆದ ಅದೆಷ್ಟೋ ಹಾಳೆಗಳ ರಾಶಿ ಹರಿದ ಸ್ಥಿತಿಯಲ್ಲಿವೆ, ಹರಿಯದೇ ನಿಂತ ನೀರಿನ ಹಾಗೆ ನೊರೆ ಭರಿತ ಕೊಳೆತು ನಾರಿ. ಬರೆದಾಗಲೇ ಸರಿಪಡಿಸಿ  ಪ್ರಕಟಿಸಿದ್ದರೆ ಸಂಕಲನವೋ, ಗ್ರಂಥವೋ  ಆಗುತ್ತಿದ್ದವೇನೋ ! ಹರಡಿ ಹಳದಿಗಟ್ಟಿವೆ  ಉಸಿರಾಡಲೂ ಅವಕಾಶವಿಲ್ಲದೆ! ಇಂಗಿಹೋಗಿವೆ ಅಕ್ಷರಗಳು ಬರದ ನಾಡಿನ ರೈತನ ಕಂಗಳಂತೆ! ಬರ ಬಂದು ಬಿರುಕುಬಿಟ್ಟ ಕೆರೆಯೊಡಲಂತೆ ಬಾಯ್ಬಿಟ್ಟಿವೆ ಅಲ್ಲಲ್ಲಿ.! ಸಾಕ್ಷಿಯಾಗಿವೆ ಸೊಳ್ಳೆ, ನೊಣ, ಜಿರಳೆಗಳ ಸಂತಾನೋತ್ಪತ್ತಿಗೆ, ಹೆರಿಗೆ ಆಸ್ಪತ್ರೆಯ ಮುಂದಿನ ಗರ್ಭಿಣಿಯಂತೆ ಸಾಲಾಗಿವೆ ಜಿರಳೆಗಳು ಅಲ್ಲಲ್ಲಿ ಜಿರಳೆ ಮೊಟ್ಟೆಗಳ ಸಾಲು ! ಬರೆವ ಹುಚ್ಚಿಗೆ ಬರೆದರೆ ಹೀಗೇ ಆಗುವುದೇನೋ? ಓದಿಸಿಕೊಳ್ಳುವ ಗಟ್ಟಿತನವಿಲ್ಲದಿದ್ದರೆ, ಸಿದ್ದವಿಲ್ಲದಿದ್ದರೆ ಓದುವ ಮನಗಳು. ಜಂಗಮನ ಪರದೆಯೊಂದು ಸಿಕ್ಕಿದೆ  ಹಾಳೆಯ ಬದಲು. ಬರೆದಿರಿವೆ ಹಾಳೆಗಳ ಅಕ್ಷರಗಳನು  ಪರದೆಯ ಮೇಲೆ . ಒಂದಷ್ಟು ಸಮಾದಾನವಿದೆ  ಓದುವವರಿರುವರಿಲ್ಲಿ ಚೂರುಪಾರು. ರಚನೆ : ಕುಮಾರ್ ಬಿ ಬಾಗೀವಾಳ್.

ಕೆಳಗಿಳಿದ ಯುದ್ದ ನಳಿಗೆ !

  ಕೆಳಗಿಳಿದ ಯುದ್ದ ನಳಿಗೆ ! ಯಾರ ಹೇರಿಕೆಯೋ ನೆರೆ ಹೊರಟಿದೆ ಶೂರ ಸೈನಿಕರ ದಂಡು, ಮೆರೆದಿವೆ ದೊರೆಯಾದೇಶದ ಗುಂಡುಗಳು ವೈರಿದೇಶದ ಧರೆಯ ರಕ್ತವನುಂಡು, ಕರಗಿವೆ ಬಹುಮಹಡಿಗಳು,ಕೊರಗಿವೆ ಬಾನಾಡಿಗಳು ಸರಿದಿವೆ ಹಿಂದೆ ಬಲತುಂಬುವ ನೆಲಗಳು , ಬರೆದಿವೆ ರಕ್ತಸಿಕ್ತ ಪುಟಗಳು, ಕಮರಿವೆ ಕನಸುಗಳು, ಸೊರಗಿವೆ ಜೀವಗಳು ತಮ್ಮವರ ಕಳೆದುಕೊಂಡು, ಭಕ್ಷಕರೆದುರಿಗೆ ನಿಲ್ಲಲಣಿಯಾಗಿವೆ ದೇಶರಕ್ಷಕರ ದಂಡು ಅಬಲೆ ನಾನಲ್ಲ ಸಬಲೆ ನಾ ಪ್ರಶ್ನಿಸುವೆ ದಾಳಿಯನು ಎನ್ನುತ್ತಾ,  ಎದುರು ನಿಂತ ಸೈನಿಕನ ಬಂದೂಕಿನನಳಿಗೆಗೆ ,  ಎದುರು ನಿಂತ ಬಾಲಕಿ ಎದುರು ಬಂದೂಕಿಗೂ ಗೊಂದಲ ತನ್ನ ಕೆಲಸದ ಬಗ್ಗೆ ಕೊಲ್ಲುವುದು ನನ್ನ ಕೆಲಸವಾದರೂ ಕೊಲ್ಲಲಾಗುತಿಲ್ಲ ನಿಲ್ಲಲಾರೆ ಬಾಲಕಿ ಎದುರು ನನ್ನದೇಕೆ ನಿರುತ್ತರ ಎಂದು. ಸೈನಿಕನ ಕೈ ಸೋತಿವೆ  ಮಾನವೀಯತೆಯೆದುರು, ಬಂದೂಕಿನ ನಳಿಗೆಯ ಬಾಯಿ ಮುಚ್ಚಿದೆ ಬಾಲಕಿಯ ದಿಟ್ಟತನದೆದುರು.    ಕೊಳವೆಯೊಳಡಗಿದ ಗುಂಡಿನ ಸದ್ದಡಗಿದೆ ಮುದ್ದಾದ ಭವಿತದೆದುರು. ಬಾಲಕಿಯ ಮೌನಕೆ ಭೋರ್ಗರೆವ  ಕ್ಷಿಪಣಿ, ಯುದ್ದದ ಹಕ್ಕಿಗಳ ಹಾರಾಟವೂ ಸಹಕರಿಸುವ ಸಂದೇಶವೊಂದು ಸದ್ದಿಲ್ಲದೆ ಸಾರಿದೆ ಆಗಸದಿಂದ ಸಾಗರದಂಚಿಗೂ. ಕಲ್ಲೆದೆಯ ಸೈನಿಕನೆದೆಯಲ್ಲಿ  ಹೂ ಹರಳಿದಂತಾ ಅನುಭವ ರುಂಡ ಚಂಡಾಡುವ ಹಠವಿಲ್ಲಿ ಕಂಡೂ ಕಾಣದಂತೆ ಮಟಮಾಯ, ಬದುಕು ಕಟ್ಟಿಕೊಳಲು ಬಂದ ನಾನು ಬದುಕ ಕಳಚಲು ಗುಂಡು ಸಿಡಿಸಬೇಕೆ? ಸಿಡಿದಿವೆ ನೂರಾರು ಗುಂಡುಗಳು ಸೈನಿಕ...

ಸಮಾಂತರ ಶ್ರೇಢಿಗಳು Arithmetic Progression

  ಸಮಾಂತರ ಶ್ರೇಢಿಗಳು ಒಂದು ಶ್ರೇಢಿಯ ಅನುಕ್ರಮ ಪದಗಳ ನಡುವಿನ ವ್ಯತ್ಯಾಸ ಒಂದೇ ಆಗಿದ್ದರೆ ಆ ಶ್ರೇಢಿಯನ್ನು ಸಮಾಂತರ ಶ್ರೇಢಿ ಎನ್ನುತ್ತಾರೆ. ಉದಾ : 2,4,6,8,10.... ಇಲ್ಲಿ 2&4 ರ ವ್ಯತ್ಯಾಸ 2        6&4 ರ ವ್ಯತ್ಯಾಸ 2        8&6 ರ ವ್ಯತ್ಯಾಸ 2 ಹೀಗೆ ವ್ಯತ್ಯಾಸ ಸಮವಾಗಿರುತ್ತದೆ ಆದ್ದರಿಂದ ಈ ವ್ಯತ್ಯಾಸವನ್ನು ಸಾಮಾನ್ಯ ವ್ಯತ್ಯಾಸ ಎನ್ನುತ್ತೇವೆ. ಸಮಾಂತರ ಶ್ರೇಢಿ 2, 4,6,8,10.... ಇಲ್ಲಿ  2 ಮೊದಲಪದವಾಗಿದ್ದು ಸಾಮಾನ್ಯ ವ್ಯತ್ಯಾಸ 2 ಆಗಿದೆ‌. ಸಮಾಂತರ ಶ್ರೇಢಿಯ ಸಾಮಾನ್ಯ ಪದವನ್ನು ಕಂಡುಹಿಡಿಯುವ ಸೂತ್ರ  an= a+(n-1)d ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ  d = an+1 - an ಸಮಾಂತರ ಶ್ರೇಢಿಯ nನೇ ಪದಗಳವರೆಗಿನ ಮೊತ್ತ ಕಂಡುಹಿಡಿಯುವ ಸೂತ್ರ  Sn=n/2[2a+(n-1)d or Sn =n/2[a+an]  ಸಮಾಂತರ ಶ್ರೇಢಿಯ ಸಾಮಾನ್ಯ ರೂಪ   a, a+d, a+2d, a+3d,.....a+(n-1)d. ಸರಳ ಸಮಸ್ಯೆಗಳು :  1) 2,5,8,11....ಈ ಸಮಾಂತರ ಶ್ರೇಢಿಯ 12 ನೇ ಪದ ಕಂಡುಹಿಡಿಯಿರಿ. ಪರಿಹಾರ :  ಶ್ರೇಢಿ 2,5,8,11... ಇಲ್ಲಿ                 a = 2    d=3    n= 12                an =...

ಹನಿಗವನಗಳು

 ನೇಸರ ನಾಳೆ ನೀನೇ ಬರಬೇಕು ನೇಸರ ಸ್ವಾಗತಕೆ, ದಿವ್ಯತೆಗೆ ಮರಳಿ  ಇರಳಲಿ ಕಳೆದ ಭವ್ಯತೆಯ ತೆರೆದಿಡಲು. ಭೂಮಿ ಹೊದ್ದ ಹಸಿರ ತೋರಲು ಹಕ್ಕಿ ಕೊರೊಳಲು ಗಾನ ಉಕ್ಕಲು _ಕುಮಾರ್ ಬಿ ಬಾಗೀವಾಳ್. ಜೂಟಾಟ. ದಿನವೂ ನಡೆದಿದೆ ಸೂರ್ಯ ಚಂದ್ರರ ಜೂಟಾಟ ಹಾಗಾಗಿಯೇ ಬೆಳಗು ಕತ್ತಲೆಯ ನೆರಳಾಟ. - ಕುಮಾರ್ ಬಿ ಬಾಗೀವಾಳ್ ಹೊಡೆದವರಾರು ಚಂದಿರನ ಚೆಲ್ಲಿದೆ ಬೆಳಕು ಅಂಗಳ ತುಂಬ ಹಾಲಾಗಿ,  ಕರೆದವರ್ಯಾರೋ ಹಾಲನು ಇಲ್ಲಿ ಕೇಳಿದ ಪುಟ್ಟ ಪ್ರಶ್ನೆಯ ಸಾಲಾಗಿ. ಪೂರ್ಣ ಚಂದಿರನ ಬೀಳಿಸಿ  ಹೊಡೆದವರ್ಯಾರೋ ಹೋಳಾಗಿ. _ ಕುಮಾರ್ ಬಿ ಬಾಗೀವಾಳ್ ಜಾರಿದ ಸೂರ್ಯ. ಗಿರಿ ತುದಿಯಲಿ ಮೂಡಿದ ಸೂರ್ಯ ಹಾರಿದ ಬಾನಿಗೆ ಪಟವಾಗಿ ಸೂತ್ರವ ಎಳೆದ ಮರುಕ್ಷಣವೇ ಮುಳುಗಿದ ಕಡಲಲಿ  ಸ್ಪುಟವಾಗಿ. _ ಕುಮಾರ್ ಬಿ ಬಾಗೀವಾಳ್. ಬಾರೋ ಚಂದಿರ ಬಾರೋ ಚಂದಿರ  ಬಾರೋ ಚಂದಿರ ತೋರೋ ಸುಂದರ ಮೊಗವನು ಈಗಲೆ, ಕಾರೋ ಬಿಸಿಲಲಿ ಸೊರಗಿರೋ ಮೋರೆಗೆ ತಂಪನು ತಾರೋ ಸಲುವಾಗಿ.

ತೋರು ನೀ ಮುಖವನ್ನ ನನ್ನ ಕಂದಾ...Thoru nee mukhavanna nanna kanda... Lori writing by Kumar B Bagival

  ತೋರು ನೀ ಮುಖವನ್ನ ನನ್ನ ಕಂದಾ... ರಚನೆ : ಕುಮಾರ್ ಬಿ ಬಾಗೀವಾಳ್ ತಾರೆಗಳ ಗೊಂಚಲು ತೇರೇರಿ ಬಂದಿವೆ ತೋರು ನೀ ಮುಖವನ್ನ ನನ್ನ ಕಂದಾ, ತಾರೆಗಳನು ನೋಡುವೆನು ನಿನ್ನ ಕಂಗಳಲಿ ನನ್ನ ಮಗುವೆ, ಚಂದಿರನ ಮುಂದಿಟ್ಟು ತೋರುವೆ ನಿನ್ನನವಕೆ. ಹಕ್ಕಿಗಳ ಹಿಂಡೊಂದು ಹಾರುತಾ ಬಂದಿವೆ ತೋರು ನೀ ಮುಖವನ್ನ ನನ್ನ ಕಂದಾ ಚಿಲಿಪಿಲಿಯ ಕೇಳುವೆನು ನಿನ್ನ ಮಾತಲಿ ನನ್ನ ಮಗುವೆ, ಚಟಪಟ ಮಾತುಗಳ ಕೇಳಿಸುವೆನು ಅವಕೆ. ಸುಯ್ಯನೆ ಸುಳಿಯುತ್ತ ತಣ್ಣನೆಯ ತಂಗಾಳಿ ಬಂದಿವೆ ತೋರು ನೀ ಮುಖವನ್ನ ನನ್ನ ಕಂದಾ ಮುಂಗುರುಳ ಮುದದಾಟ ನಿನ್ನ ಮೊಗದ ಮೇಲೇರಿ  ನನ್ನ ಮಗುವೆ, ಮುಂಗುರುಳಾಟವನು ತೋರುವೆನವಕೆ. ಎಳೆ ಜೋಳದಾ ತೆನೆಗಳು ಹರಿಯಾಗಿ ಬಂದಿವೆ ತೋರು ನೀ ಮುಖವನ್ನ ನನ್ನ ಕಂದಾ ಹಾಲು ಹಲ್ಲುಗಳ ತೆನೆಯ ನೋಡುವೆನು ನೀ ನಗುವಾಗ ನನ್ನ ಮಗುವೆ, ಸಾಲು ಹಾಲು ಹಲ್ಗಳ ಪಂಕ್ತಿಯನು ತೋರುವೆನವಕೆ. ಸುಕಾಲ ಸಾಲುಗಳು ಸಾಲಾಗಿ ನಿಂದಿವೆ ತೋರು ನೀ ಮುಖವನ್ನು ನನ್ನ ಕಂದಾ ಸಾಧನೆಯ ಹಾದಿಯ ಆದಿಯನು ಕಾಣುವೆನು ನನ್ನ ಮಗುವೆ, ಸೋಲಿರದ ಹಾದಿಯ ಗೆಲುವನ್ನು ತೋರುವೆನವಕೆ.