ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು?
ಮಕರ ಸಂಕ್ರಾಂತಿಯ ನಿಜವಾದ ಆಚರಣೆ ಎಂದು? ಮಕರ ಸಂಕ್ರಾಂತಿ ಕುರಿತ ವೈಜ್ಞಾನಿಕ ಲೇಖನ: ಕುಮಾರ್.ಬಿ.ಬಾಗೀವಾಳ್ ಸಂಕ್ರಾಂತಿ ಅಸಲಿಗೆ ಸಂಕ್ರಮಣ. ಅರ್ಥಾತ್ ಹೇಮಂತ ಋತು,ಶಿಶಿರ ಋತುಗಳ ಸಂಧಿಕಾಲ. ಭಾರತದ ಬಹುತೇಕ ರಾಜ್ಯಗಳು ಈ ದಿನವನ್ನು ಮಕರಸಂಕ್ರಾಂತಿ ಎಂದು ಆಚರಿಸುವ ಸಂಪ್ರದಾಯವನ್ನು ರೂಢಿಸಿಕೊಂಡು ಬಂದಿವೆ. ಪುಣ್ಯಸ್ನಾನ,ಎಣ್ಣೆಮಜ್ಜನ,ಎಳ್ಳುಬೆಲ್ಲ ಪರಸ್ಪರವಾಗಿ ಹಂಚುವಿಕೆ, ಅವರೆಕಾಯಿ, ಕಡಲೆಕಾಯಿ, ಸಿಹಿಗೆಣಸು ಬೇಯಿಸಿ ತಿನ್ನುವ, ರಾಸು ಪೂಜೆ,ಕಿಚ್ಚು ಹಾಯಿಸುವುದು ಗಾಳಿಪಟ ಹಾರಿಸುವುದು ಹೀಗೆ ಆಚರಿಸುವ ಪದ್ದತಿಗಳು ಬೆಳೆಯುತ್ತಾ ಹೋಗುತ್ತವೆ. ಅದಿರಲಿ ಇದರ ಹಿಂದಿನ ಅಸಲಿ ವಿಜ್ಞಾನದ ಅಂಶಗಳನ್ನು, ಹಾಗು ಜ್ಯೋತಿಷ್ಯದ ಅಂಶಗಳನ್ನೂ, ಸಂಪ್ರದಾಯವನ್ನು ಒಗ್ಗೂಡಿಸಿದ ದೃಷ್ಟಿಯಿಂದ ಈ ಲೇಖನ ಬರೆಯುತ್ತಿದ್ದೇನೆ. ಅಂದಹಾಗೆ ಮಕರ ಸಂಕ್ರಾಂತಿಯ ವೈಜ್ಞಾನಿಕ ಸ್ವರೂಪದ ಅಂಶವನ್ನು ಗಮನಿಸುವುದಾದರೆ ಉತ್ತರಾಯಣ ಕಾಲದಲ್ಲಿನ ಪ್ರಥಮ ಸಂಕ್ರಮಣ ಮಕರ ರಾಶಿಯಲ್ಲಿ ಎಂಬುದು. ಸ್ವಲ್ಪಮಟ್ಟಿಗೆ ವಿವರವಾಗಿ ನೋಡೋದಾದರೆ ಖಗೋಳ ದಲ್ಲಿನ ನಕ್ಷತ್ರಗಳ ಗುಂಪುಗಳನ್ನು ಬೇರೆ ಬೇರೆ ಕಲ್ಪಿತ ಆಕೃತಗಳಾಗಿ ನೋಡುತ್ತಾ ಅವುಗಳನ್ನು ನಕ್ಷತ್ರ ಪುಂಜ ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಹನ್ನೆರಡು ನಕ್ಷತ್ರ ಪುಂಜಗಳು ವೃತ್ತಾಕಾರದ ರೀತಿಯಲ್ಲಿ ಜೋಡಿಸಲ್ಪಟ್ಟಿರುತ್ತವೆ ಈ ಹನ್ನೆರಡು ನಕ್ಷತ್ರ ಪುಂಜಗಳನ್ನು ನಕ್ಷತ್ರ ರಾಶಿಗಳು ಎನ್ನುತ್ತೇವೆ. ಮೇಷ,ವೃಷಭ....ಹೀಗೆ ಇದರ...
Comments
Post a Comment