Poem: DUDIYUVA KAI NEE MADIYADIRU. (About farmers) BY KUMAR B BAGIVAL
ದುಡಿಯುವ ಕೈ ನೀ ಮಡಿಯದಿರು.
ದುಡಿಯುವ ಕೈ ನೀ ಮಡಿಯದಿರು
ಸುಡುವ ಕಷ್ಟಗಳೆಷ್ಟೇ ಬರಲಿ
ಮಾಡುವ ಕಾಯಕದೊಳಿಷ್ಟವು ಇರಲಿ
ಚಿನ್ನಕು ಮಿಗಿಲು ಅನ್ನವನು
ಈ ಜಗಕೆ ನೀನೆ ಇತ್ತವನು.
ಮಸುಕಲಿ ಎದ್ದು,ಹೊಲದಲಿ ಸದ್ದು
ಮಾಡುತಲಿರುವ ನಿನ್ನನು ನೋಡಿ
ನಾಚುತ ತಾ ನೇಸರ ಮೂಡಿ
ತಾ ಕೆನ್ನೆಯ ಕೆಂಪನೆ ಮಾಡಿದನು.
ಸುಡು ಬಿಸಿಲಿಗು ಜಗ್ಗದ ನಿನ್ನನು
ಮೆಚ್ಚುವ ಗಡಿಯ ಕಾಯ್ವ ಯೋಧನು.
ಮಳೆಗೆ ಕೊಡೆ ಹಿಡಿಯದ,ಚಳಿಗೂ
ಚಳಿಯಿಡಿಸುವ ಧೃತಿಗೆಡದ ಮೈ ಅದು
ಕೈ ಕೆಸರಾದರು ಲೋಕದ ಬಾಯಿಗೆ ಮೊಸರದು
ತಾ ಸೋತರೂ ಜಗವ ಗೆಲಿಸುವ ತ್ಯಾಗವು
ನೀನಗಲ್ಲದೆ ಮತ್ಯಾರಿಗಿದೆ ಆ ಧೈರ್ಯವು?
ಬೆಳೆವುದು ನೂರಾದರೆ ಪಡೆವುದು ಚೂರು
ಕೊಳಗಕೂ ಮೀರಿದ ಆಸೆಯಾದರೂ
ಬಳಗಕೆಲ್ಲ ಸುರಿದಳೆವ ಒತ್ತಾಸೆಯು ನಿನದು
ಬೆನ್ನೆಲುಬು ನೀನಾದರು ಜಗಕೆ
ಜಗವೇ ನಿಂತಿದೆ ನಿನ್ನಯ ಬೆನ್ನಿಗೆ.
ಉರುಳಿಗೆ ಕೊರಳನೊಡ್ಡದಿರು
ಬೆರಳು ಮಾಡದ ಹಾಗೆ ನಿನ್ನೆಡೆಗೆ.
ವಿರಮಿಸದಿರು ಬದುಕ ಮಾಡು
ಹೊನ್ನ ,ಒಮ್ಮೆ ಮಾತ್ರ ಮನುಜ ಜನ್ಮ
ನೋಡಲಿ ಎಲ್ಲರೂ ಕೊರಳೆತ್ತಿ ನಿನ್ನ.
ರಚನೆ: ಕುಮಾರ್. ಬಿ.ಬಾಗೀವಾಳ್.
ಧೀಶಕ್ತಿ ಅಂಬೇಡ್ಕರ
ನಿಂತಿಲ್ಲವೋ ಅವು ನಡೆದಿವೆ ಅಡಿಗಡಿಗೂ
ಬಿರಿದು ಕಾಡುತ್ತಿವೆ,ಹಾದಿಬೀದಿಯಲಿ
ಬೊಳ್ಳು ಹಾಕುತ್ತಿವೆ ಗುಳ್ಳೆನರಿಗಳು
ನೀನಿಲ್ಲದೆ ನಮ್ಮೊಳಗೆ, ಅವತರಿಸು ಮತ್ತೊಮ್ಮೆ.
ಮೊಡ್ಡಾಗಿವೆ ಮೊನಚು ಸೂಜಿಗಳು
ಹೊಲೆಯಲಾಗದೆ ಬದುಕ ಚಾದರವ
ಮೈಯ್ಯೊಡ್ಡಿ ನಿಂತಿವೆ ಬಿಸಿಲ್ಮಳೆಚಳಿಗೆ
ನೀನಿಲ್ಲದೆ ನಮ್ಮೊಳಗೆ, ಅವತರಿಸು ಮತ್ತೊಮ್ಮೆ.
ಸಿಹಿಯಾಗಲೊರಟ ಊಟದಲೂ
ನಂಜನುಣ್ಣುತಿವೆ ಬದುಕಲೋಸುಗ
ಮಸಕಾಗಿವೆ ಹೊಸಕಿ ಹಾಕದೆ ಹುಳುವ
ನೀನಿಲ್ಲದೆ ನಮ್ಮೊಳಗೆ ,ಅವತರಿಸು ಮತ್ತೊಮ್ಮೆ.
ಸಾಕಿಡಿಸಿದ ಹಸಿ ಹುಸಿಭರವಸೆಗಳು
ಮಾರುತ್ತಿವೆ ಹಸಿಮಾಂಸದ ಮುದ್ದೆಗಳ
ಕಾಳಸಂತೆಯ ಕದ್ದ ಮಾಲುಗಳಂತೆ
ನೀನಿಲ್ಲದೆ ನಮ್ಮೊಳಗೆ, ಅವತರಿಸು ಮತ್ತೊಮ್ಮೆ.
ಅರೆಬೆಂದ ಹಸಿ ಉರುವಲ ಉರಿ
ಉಗುಳುತ್ತಿದೆ ಕಾರೊಗೆಯ ಬೂದಿ
ಸುರಿದಂತೆ ಬಾನಿಂದ ಆಮ್ಲಮಳೆ
ನೀನಿಲ್ಲದೆ ನಮ್ಮೊಳಗೆ, ಅವತರಿಸು ಮತ್ತೊಮ್ಮೆ.
ನೀನಿದ್ದರೆ ನಮ್ಮೊಳಗೆ ಹೆದ್ದಾರಿಯೇ
ಆಗುವೆ ಕಾಲುದಾರಿಯ ಬದಲಾಗಿ
ಕೊಂಡೊಯ್ಯುವೆ ನಮ್ಮವರ ಗುರಿ ಮುಟ್ಟುವರೆಗೆ
ನೀನಿಲ್ಲಿಯೆ ಅವತರಿಸು ,ಮತ್ತೊಮ್ಮೆ ನಮ್ಮೊಳಗೆ.
ನೀನಿದ್ದರೆ ನಮ್ಮೊಳಗೆ ಜಗಕೆ ಕಣ್ಣೇ
ಆಗುವೆ ಹುಣ್ಣಾಗುವ ಬದಲಾಗಿ
ಕರೆದೊಯ್ಯುವೆ ನಮ್ಮವರ ಬೆಳಕಿನೆಡೆಗೆ
ನೀನಿಲ್ಲಿಯೆ ಅವತರಿಸು, ಮತ್ತೊಮ್ಮೆ ನಮ್ಮೊಳಗೆ.
ವಿಷ್ಣುವಿನಿಗ್ಷಟೇ ಏಕೆ ದಶಾವತಾರ
ನೀನೂ ತಳೆ ಮತ್ತೊಂದು ಅವತಾರ
ಕೊಡು ನಿನ್ನವರಿಗೆ ಯಶೋಹತಾರ
ಓ ನನ್ನವರ ಧೀಶಕ್ತಿ ಶ್ರೀ ಅಂಬೇಡ್ಕರ.
ರಚನೆ: ಕುಮಾರ್. ಬಿ.ಬಾಗೀವಾಳ್.
ಧೀಶಕ್ತಿ ಅಂಬೇಡ್ಕರ
ನಿಂತಿಲ್ಲವೋ ಅವು ನಡೆದಿವೆ ಅಡಿಗಡಿಗೂ
ಬಿರಿದು ಕಾಡುತ್ತಿವೆ,ಹಾದಿಬೀದಿಯಲಿ
ಬೊಳ್ಳು ಹಾಕುತ್ತಿವೆ ಗುಳ್ಳೆನರಿಗಳು
ನೀನಿಲ್ಲದೆ ನಮ್ಮೊಳಗೆ, ಅವತರಿಸು ಮತ್ತೊಮ್ಮೆ.
ಮೊಡ್ಡಾಗಿವೆ ಮೊನಚು ಸೂಜಿಗಳು
ಹೊಲೆಯಲಾಗದೆ ಬದುಕ ಚಾದರವ
ಮೈಯ್ಯೊಡ್ಡಿ ನಿಂತಿವೆ ಬಿಸಿಲ್ಮಳೆಚಳಿಗೆ
ನೀನಿಲ್ಲದೆ ನಮ್ಮೊಳಗೆ, ಅವತರಿಸು ಮತ್ತೊಮ್ಮೆ.
ಸಿಹಿಯಾಗಲೊರಟ ಊಟದಲೂ
ನಂಜನುಣ್ಣುತಿವೆ ಬದುಕಲೋಸುಗ
ಮಸಕಾಗಿವೆ ಹೊಸಕಿ ಹಾಕದೆ ಹುಳುವ
ನೀನಿಲ್ಲದೆ ನಮ್ಮೊಳಗೆ ,ಅವತರಿಸು ಮತ್ತೊಮ್ಮೆ.
ಸಾಕಿಡಿಸಿದ ಹಸಿ ಹುಸಿಭರವಸೆಗಳು
ಮಾರುತ್ತಿವೆ ಹಸಿಮಾಂಸದ ಮುದ್ದೆಗಳ
ಕಾಳಸಂತೆಯ ಕದ್ದ ಮಾಲುಗಳಂತೆ
ನೀನಿಲ್ಲದೆ ನಮ್ಮೊಳಗೆ, ಅವತರಿಸು ಮತ್ತೊಮ್ಮೆ.
ಅರೆಬೆಂದ ಹಸಿ ಉರುವಲ ಉರಿ
ಉಗುಳುತ್ತಿದೆ ಕಾರೊಗೆಯ ಬೂದಿ
ಸುರಿದಂತೆ ಬಾನಿಂದ ಆಮ್ಲಮಳೆ
ನೀನಿಲ್ಲದೆ ನಮ್ಮೊಳಗೆ, ಅವತರಿಸು ಮತ್ತೊಮ್ಮೆ.
ನೀನಿದ್ದರೆ ನಮ್ಮೊಳಗೆ ಹೆದ್ದಾರಿಯೇ
ಆಗುವೆ ಕಾಲುದಾರಿಯ ಬದಲಾಗಿ
ಕೊಂಡೊಯ್ಯುವೆ ನಮ್ಮವರ ಗುರಿ ಮುಟ್ಟುವರೆಗೆ
ನೀನಿಲ್ಲಿಯೆ ಅವತರಿಸು ,ಮತ್ತೊಮ್ಮೆ ನಮ್ಮೊಳಗೆ.
ನೀನಿದ್ದರೆ ನಮ್ಮೊಳಗೆ ಜಗಕೆ ಕಣ್ಣೇ
ಆಗುವೆ ಹುಣ್ಣಾಗುವ ಬದಲಾಗಿ
ಕರೆದೊಯ್ಯುವೆ ನಮ್ಮವರ ಬೆಳಕಿನೆಡೆಗೆ
ನೀನಿಲ್ಲಿಯೆ ಅವತರಿಸು, ಮತ್ತೊಮ್ಮೆ ನಮ್ಮೊಳಗೆ.
ವಿಷ್ಣುವಿನಿಗ್ಷಟೇ ಏಕೆ ದಶಾವತಾರ
ನೀನೂ ತಳೆ ಮತ್ತೊಂದು ಅವತಾರ
ಕೊಡು ನಿನ್ನವರಿಗೆ ಯಶೋಹತಾರ
ಓ ನನ್ನವರ ಧೀಶಕ್ತಿ ಶ್ರೀ ಅಂಬೇಡ್ಕರ.
ರಚನೆ: ಕುಮಾರ್. ಬಿ.ಬಾಗೀವಾಳ್.
Comments
Post a Comment