Poem : Prema Sakshi. By; Kumar B Bagival
ಪ್ರೇಮ ಸಾಕ್ಷಿ
ಹೊಚ್ಚಹೊಸ ಕನಸು ಇನಿಯ
ಅಚ್ಚಳಿಯದ ಪಚ್ಚೆ ಹಸಿರು
ಮುಚ್ಚಳಿಕೆ ಬರೆದು ಕೊಟ್ಟಿದೆ ಸಾಕ್ಷಿಗೆ.
ಮನಸುಖಿಸುವ ಮೆಲ್ಲಮಾತನೊಮ್ಮೆ
ಕೇಳಿದ ಆ ಹೊಂಗೆ ಮರವು
ಹರಸುವೆನೆಂದು ಹೇಳಿ
ಈ ಭೃಂಗದ ಬೆನ್ನನೇರಿ ಬಂದಿದೆ.
ಮುಂಗುರುಳಿಗೆ ಮನವ ಸೋತ
ಆ ಮಲ್ಲಿಗೆ ಮುಡಿಯನೇರಿ
ಮದವೇರಿದ ಚೆಲುವು ಕೊಟ್ಟು
ಮಧುವ ತುಂಬಲು ತಾ ಬಂದಿದೆ
ಮೈಸೋಕಿಸೊ ಹಠಕೆ ಬಿದ್ದ
ಈ ಪರ್ಣವು ಮೈನೋಯದೆ
ಹಣ್ಣಾಗಿ ಬಿದ್ದು ನೆಲವ ಸೇರಿ
ಮೃಧುವಾಗಿದೆ ಈ ಪಲ್ಲಂಗದಿ.
ಹೇಮಂತಕು ಬಿಸಿಯಾಗುವ
ಆಸೆ ಹುಟ್ಟಿದೆ, ಸುಡು ಬೇಸಿಗೆಯಲು
ಮತ್ತೊಮ್ಮೆ ಮೈಯ ಚಾಚಿ
ಮಗ್ಗುಲಾಗಿ ನಾಚಿಕೆಯಲಿ ನೆಲಕಚ್ಚಿದೆ.
ಮಧುವನೀರೊ ಪರಿಯ ನೋಡಿ
ಆ ಧುಂಬಿಗೆ ಪುಷ್ಪವೊಂದು
ಪಾಠ ಹೇಳಿ ತಿಳಿ ನೀನು ಈ ಕಲೆಯ
ಎಂದು ಹೇಳಿ ತಲೆಬಗ್ಗಿಸಿ ಮೌನವಾಗಿದೆ.
ಕನಸ ಪಯಣವಲ್ಲವೇ ಪಣದ
ಬದುಕಿಗೆ ದಿಶೆ ನಮಗಿಲ್ಲಿ
ಮಧುರ ಮಾಸದು ಜೀವ
ಬದುಕ ಬೇಕಿದೆ ಮೀರಿ ಸಾವ.
ರಚನೆ: ಕುಮಾರ್. ಬಿ.ಬಾಗೀವಾಳ್.
Comments
Post a Comment